ADVERTISEMENT
Friday, September 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ, ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ!

admin by admin
September 4, 2026
in Newsbeat, State, Uncategorized, ರಾಜ್ಯ
bengaluru-airport-care-by-blr-premium-vip-services-passengers

bengaluru-airport-care-by-blr-premium-vip-services-passengers

Share on FacebookShare on TwitterShare on WhatsappShare on Telegram

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ತನ್ನ ಪ್ರಯಾಣಿಕರ ವಿಮಾನಯಾನ ಅನುಭವವನ್ನು ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಐಷಾರಾಮಿಯಾಗಿಸುವ ಉದ್ದೇಶದಿಂದ ʼಕೇರ್ ಬೈ ಬಿಎಲ್‌ಆರ್’ ಎಂಬ ಹೊಸ ವೈಯಕ್ತಿಕ ಸೇವಾ ಬ್ರ್ಯಾಂಡ್ ಅನ್ನು ಪರಿಚಯಿಸಿದೆ.

ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಓಡಾಡುವಾಗ ಆಗುವ ಸುಸ್ತು ಹಾಗೂ ಗೊಂದಲಗಳನ್ನು ನಿವಾರಿಸಿ, ಪ್ರತಿಯೊಬ್ಬರಿಗೂ ಅವರ ಅಗತ್ಯಕ್ಕೆ ತಕ್ಕಂತೆ ವಿಐಪಿ ಫೀಲ್ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ಈ ಸೇವೆಗಳು ಲಭ್ಯವಿದ್ದು, ವಿಮಾನಗಳ ವೇಳಾಪಟ್ಟಿಗೆ ಅನುಗುಣವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ.

Related posts

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

September 4, 2026
swiggy-delivery-partners-hero-bike-discount-easy-loan-deal

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್‌ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

September 4, 2026

ಬುಕ್ಕಿಂಗ್ ಮಾಡುವುದು ಹೇಗೆ?

ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿರುವ ʼಬಿಎಲ್‌ಆರ್‌ ಪಲ್ಸ್ ಆ್ಯಪ್’, ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ (www.bengaluruairport.com/carebyblr) ಅಥವಾ ಏರ್‌ಪೋರ್ಟ್‌ನ ಕೌಂಟರ್‌ಗಳ ಮೂಲಕ ಈ ಪ್ರೀಮಿಯಂ ಸೇವೆಗಳನ್ನು ಸುಲಭವಾಗಿ ಬುಕ್ ಮಾಡಬಹುದು. ವಾಕ್ ಇನ್ ಸೇವೆಗಳೂ ಲಭ್ಯವಿದ್ದರೂ, ಮುಂಗಡವಾಗಿ ಬುಕ್ ಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗಿದೆ.

‘ಕೇರ್ ಬೈ ಬಿಎಲ್‌ಆರ್’ ಅಡಿಯಲ್ಲಿ ಸಿಗುವ 10 ಪ್ರಮುಖ ಸೇವೆಗಳು ಇಲ್ಲಿವೆ:
1. ಮೀಟ್ ಅಂಡ್ ಅಸಿಸ್ಟ್ (ವಿಶೇಷ ನೆರವು): ಏರ್‌ಪೋರ್ಟ್‌ಗೆ ಕಾಲಿಟ್ಟಾಗಿನಿಂದ ಚೆಕ್-ಇನ್, ಭದ್ರತಾ ತಪಾಸಣೆ, ಇಮಿಗ್ರೇಷನ್ ಮತ್ತು ಲಗೇಜ್ ಪಡೆಯುವವರೆಗೆ ಪ್ರತಿಯೊಂದು ಹಂತದಲ್ಲೂ ತರಬೇತಿ ಪಡೆದ ಸಿಬ್ಬಂದಿ ನಿಮ್ಮ ಜೊತೆಯಿದ್ದು ಸಂಪೂರ್ಣ ಸಹಾಯ ಮಾಡಲಿದ್ದಾರೆ.
2. ಐಷಾರಾಮಿ ಲಿಮೋ ಸೇವೆ: ಏರ್‌ಪೋರ್ಟ್‌ನಿಂದ ನಗರಕ್ಕೆ ಅಥವಾ ನಗರದಿಂದ ಏರ್‌ಪೋರ್ಟ್‌ಗೆ ಬರಲು ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರುಗಳ (ಚಾಲಕಸಹಿತ) ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
3. ಹೂವು ಮತ್ತು ಬೊಕೆ ಸೇವೆ: ನಿಮ್ಮ ಪ್ರೀತಿಪಾತ್ರರನ್ನು ಸ್ವಾಗತಿಸಲು, ಸರ್ಪ್ರೈಸ್ ಮಾಡಲು ಅಥವಾ ಬೀಳ್ಕೊಡಲು ಸುಂದರವಾದ, ತಾಜಾ ಹೂವಿನ ಬೊಕೆಗಳನ್ನು ಇಲ್ಲಿಯೇ ಒದಗಿಸಲಾಗುತ್ತದೆ.
4. ಕೇರ್ ಬೈ ಬಿಎಲ್‌ಆರ್ ಲೌಂಜ್ (ಟಿ-1): ಪ್ರಯಾಣಿಕರು ಮತ್ತು ಅವರ ಜೊತೆ ಬಂದವರಿಗಾಗಿ ಇದೊಂದು ಆರಾಮದಾಯಕ ವಿಶ್ರಾಂತಿ ತಾಣವಾಗಿದೆ. ಇಲ್ಲಿ ರಿಫ್ರೆಶ್‌ಮೆಂಟ್‌ ಹಾಗೂ ಬ್ಯುಸಿನೆಸ್ ಮೀಟಿಂಗ್‌ಗಳನ್ನು ನಡೆಸಲು ಪ್ರತ್ಯೇಕ ಸಭಾಂಗಣವೂ ಇದೆ.
5. ಲಗೇಜ್ ಸ್ಟೋರೇಜ್: ವಿಮಾನ ತಡವಿದ್ದರೆ ನಿಮ್ಮ ಲಗೇಜ್ ಅನ್ನು ಹೊತ್ತುಕೊಂಡು ತಿರುಗಬೇಕಿಲ್ಲ. ಇಲ್ಲಿ ನಿಮ್ಮ ಲಗೇಜ್ ಅನ್ನು ಸುರಕ್ಷಿತವಾಗಿಟ್ಟು ನೀವು ನಿರಾಳವಾಗಿ ಬೆಂಗಳೂರು ನಗರ ಸುತ್ತಾಡಿಕೊಂಡು ಬರಬಹುದು.
6. ವ್ಯಾಲೆಟ್ ಪಾರ್ಕಿಂಗ್: ಪಾರ್ಕಿಂಗ್ ಜಾಗ ಹುಡುಕುವ ಟೆನ್ಷನ್ ಇನ್ಮುಂದೆ ಇಲ್ಲ. ನಿಮ್ಮ ಕಾರನ್ನು ಎಂಟ್ರಿಯಲ್ಲೇ ಸಿಬ್ಬಂದಿಗೆ ಒಪ್ಪಿಸಿ ನೀವು ನೇರವಾಗಿ ಟರ್ಮಿನಲ್ ಒಳಗೆ ಹೋಗಬಹುದು.
7. ಪೋರ್ಟರ್ ಸೇವೆ: ನಿಮ್ಮ ಲಗೇಜ್ ಹೊತ್ತೊಯ್ಯಲು ವೃತ್ತಿಪರ ತರಬೇತಿ ಪಡೆದ ಸಮವಸ್ತ್ರಧಾರಿ ಸಿಬ್ಬಂದಿ (ಪೋರ್ಟರ್‌ಗಳು) ಸಹಾಯ ಮಾಡಲಿದ್ದಾರೆ.
8. ಬ್ಯಾಗೇಜ್ ರಾಪಿಂಗ್: ನಿಮ್ಮ ಬ್ಯಾಗ್‌ಗಳಿಗೆ ಗೀರು ಬೀಳದಂತೆ, ಧೂಳು ತಾಕದಂತೆ ಮತ್ತು ಬೇರೆಯವರು ತೆರೆಯದಂತೆ ರಕ್ಷಣಾತ್ಮಕ ಕವರ್ ಹಾಕಿಕೊಡಲಾಗುತ್ತದೆ.
9. ಕಾರ್ ಸ್ಪಾ: ನೀವು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ಏರ್‌ಪೋರ್ಟ್‌ನಲ್ಲಿ ಪಾರ್ಕ್ ಮಾಡಿರುವ ನಿಮ್ಮ ಕಾರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ಲೀನಿಂಗ್ ಸೇವೆ ಲಭ್ಯವಿದೆ.
10. ಏರ್‌ಸೈಡ್ ಲಿಮೋ (ವಿಐಪಿ ಸೇವೆ): ವಿಐಪಿಗಳು, ಸೆಲೆಬ್ರಿಟಿಗಳು ಹಾಗೂ ವಿಶೇಷ ನೆರವು ಬೇಕಾದವರಿಗಾಗಿ ಟರ್ಮಿನಲ್‌ನಿಂದ ನೇರವಾಗಿ ವಿಮಾನದ ಬಳಿಗೆ ಐಷಾರಾಮಿ ವಾಹನದಲ್ಲಿ ಕರೆದೊಯ್ಯುವ ವಿಶೇಷ ಸೇವೆ ಇದಾಗಿದೆ.
ಸದ್ಯಕ್ಕೆ ಈ 10 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಈ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ShareTweetSendShare
Join us on:

Related Posts

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 4, 2026
0

ಬೆಂಗಳೂರು,  ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ...

swiggy-delivery-partners-hero-bike-discount-easy-loan-deal

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್‌ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

by admin
September 4, 2026
0

ಬೆಂಗಳೂರು: ಪ್ರಮುಖ ಆನ್‌ಲೈನ್ ಫುಡ್ ಮತ್ತು ದಿನಸಿ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಡೆಲಿವರಿ ಪಾರ್ಟ್ನರ್‌ಗಳ ಅನುಕೂಲಕ್ಕಾಗಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ...

ತಮಿಳುನಾಡಿಗೆ ನೀರು ಬಿಟ್ಟರೆ ಬೀದಿಗಿಳಿದು ಹೋರಾಟ: ದರ್ಶನ್ ಪುಟ್ಟಣ್ಣಯ್ಯ

ಜಕ್ಕನಹಳ್ಳಿಯಲ್ಲಿ ಜೈವಿಕ ಪಾಂಡವಪುರ – ಬಿ ಆರ್‌ ಸಿ ಉದ್ಘಾಟನೆ

by admin
September 4, 2026
0

ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ, ಪುಟ್ಟಣ್ಣಯ್ಯ ಫೌಂಡೇಶನ್‌, ಸೆಂಟರ್‌ ಫಾರ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌, ಆಶಾ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಪಾಂಡವಪುರ ತಾಲೂಕಿನ...

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

by Shwetha
September 4, 2026
0

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಅನಭಿಷಿಕ್ತ ಸುಲ್ತಾನಿ. ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ಇಂಡಿಯಾ ಟುಡೇ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ರಶ್ಮಿಕಾ...

ಸಿಎಂ ಆಗಿದ್ದಾಗ ಕುಮಾರಸ್ವಾಮಿ 2 ದಿನ ನಾಪತ್ತೆಯಾಗಿದ್ದರು: ಮಗನನ್ನು ಹುಡುಕಿಕೊಡು ಎಂದು ದೇವೇಗೌಡರೇ ನನಗೆ ಟಾಸ್ಕ್ ಕೊಟ್ಟಿದ್ದರು; ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

ಸಿಎಂ ಆಗಿದ್ದಾಗ ಕುಮಾರಸ್ವಾಮಿ 2 ದಿನ ನಾಪತ್ತೆಯಾಗಿದ್ದರು: ಮಗನನ್ನು ಹುಡುಕಿಕೊಡು ಎಂದು ದೇವೇಗೌಡರೇ ನನಗೆ ಟಾಸ್ಕ್ ಕೊಟ್ಟಿದ್ದರು; ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

by Shwetha
September 4, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram