ಕೊರೊನಾ ತೊಲಗಿಲ್ಲ.. ಕಾದಿದೆ ಮಾರಿ ಹಬ್ಬ..!!
ಬೆಂಗಳೂರು : ಅಬ್ಬಾ..! ಅಂತೂ ಇಂತೂ ಕೊರೊನಾ ಲಸಿಕೆ ಬಂದೇ ಬಿಡ್ತು.ಇನ್ಮೇಲೆ ಟೆನ್ಷನ್ ಇಲ್ಲದೇ ಆರಾಮಾಗಿ ಇರಬೋದುದ ಅಂತ ಅಂದುಕೊಳ್ಳುವಷ್ಟರಲ್ಲಿ ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಅಪ್ಪಳಿಸಿದೆ.
ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ಕೊರೊನಾ ಮತ್ತೆ ರಣಕೇಕೆ ಹಾಕುತ್ತಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಸದ್ಯದ ಪರಿಸ್ಥಿತಿ ನೋಡಿದ್ರೆ ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ಯಾ ಅನ್ನೋ ಸಂಶಯ ಮೂಡುವಂತೆ ಮಾಡಿದೆ.
ಯಾಕೆಂದ್ರೆ ನಿನ್ನೆ ರಾಜ್ಯದಲ್ಲಿ 1587 ಪ್ರಕರಣ ವರದಿ ಆಗಿದ್ದು, 10 ಮಂದಿ ಬಲಿ ಆಗಿದ್ದಾರೆ.
ಅದರಲ್ಲೂ ಬೆಂಗಳೂರಲ್ಲಿ 1037 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮೆಟ್ರೊ ಮಂದಿಗೆ ಆಘಾತ ನೀಡಿದೆ. ಇದಲ್ಲದೆ ನಿನ್ನೆ ಕೊರೊನಾಗೆ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇದಲ್ಲದೆ ಪ್ರಾಥಮಿಕ ಸಂಪರ್ಕಿತರಲ್ಲೇ ಶೇ.50ರಷ್ಟು ಮಂದಿಗೆ ಸೋಂಕು ಹೆಚ್ಚಿರುವುದು ಗಾಬರಿ ಮೂಡಿಸಿದೆ.
ಹೀಗಾಗಿ ಒಂದು ಕೇಸ್ ನಲ್ಲಿ ಕನಿಷ್ಠ 15 ಮಂದಿ ಸಂಪರ್ಕಿತರನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆ ನೌಕರರು, ಎಂಜಿನಿಯರ್ ಗಳು ಮತ್ತು ಶಿಕ್ಷಕರನ್ನು ಬಿಬಿಎಂಪಿ ಬಳಸಿಕೊಳ್ತಿದೆ.
ಇನ್ನು ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯೋದಾಗಿ ಬಿಬಿಎಂಪಿ ತಿಳಿಸಿದೆ.