ಇಂದು ಶುಕ್ರವಾರವಾದ ಹಿನ್ನೆಲೆ ಎಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್ ನಲ್ಲಿ ತೊಡಗುವುದು ಸರ್ವೇ ಸಾಮಾನ್ಯ. ಆದರೆ ಡಿಜೆ ಹಳ್ಳಿ ,ಕೆಜಿಹಳ್ಳಿ ಯಲ್ಲಿ ಗಲಭೆ ಹಿನ್ನೆಲೆ ಕರ್ಫ್ಯೂ ಜಾರಿಯಲ್ಲಿದ್ದು, ಸಾಮೂಹಿಕ ನಮಾಜ್ , ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ನಮಾಜ್ ಇದೆ ಎಂದು ಯಾರು ಕೂಡ ರಸ್ತೆಯಲ್ಲಿ ಅಡ್ಡಾಡದಂತೆ ನೋಡಿಕೊಳ್ಳುವಂತೆ ಭದ್ರತಾ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಭದ್ರತೆ ರೂಲ್ ಕಾಲ್ ವೇಳೆ ಪೊಲೀಸರಿಗೆ ಈ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನೂ ಅನವಶ್ಯಕವಾಗಿ ಯಾರೂ ಕೂಡ ಒಡಾಡದಂತೆ ನಿಗಾ ವಹಿಸಲು ಸೂಚಿಸಲಾಗಿದೆ. ಬೆಂಗಳೂರಿನ ಎಂಟು ವಲಯಗಳಿಂದ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 1500 ಕ್ಕೂ ಹೆಚ್ಚು ಪೊಲೀಸರನ್ನು ಇಂದು ಭದ್ರತೆಗಾಗಿ ನಗರದ್ಯಾಂತ ನಿಯೋಜಿಸಲಾಗಿದೆ. ಇನ್ನೂ ಮಸೀದಿಯ ಒರ್ವ ಮೌಲ್ವಿಗಳು ಹೋಗುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.