Cinema News : ಭಾವನಾ ಮೆನನ್ ಬೆನ್ನಿಗೆ ನಿಂತ ತಮಿಳಿನ ಸ್ಟಾರ್ ನಟ ಸೂರ್ಯ..!!
ಇತ್ತೀಚೆಗಷ್ಟೇ ಬಹುಭಾಷಾ ನಟಿ ಭಾವನಾ ಮೆನನ್ ತಾವು ನ್ಯಾಯಕ್ಕಾಗಿ ಹೋರಾಡಿ ಸಂತ್ರಸ್ತೆಯಾಗಿದ್ದರೂ ಅವಮಾನಕ್ಕೆ ಒಳಗಾದ , ಅನುಭವಿಸಿದ ಹಿಂಸೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು..
ಭಾವನಾ ಮೆನನ್ ಗೆ ಅನೇಕರು ಬೆಂಬಲಿಸಿದ್ದು , ಇದೀಗ ತಮಿಳಿನ ಸ್ಟಾರ್ ನಟ ಸೂರ್ಯ ಅವರು ಭಾವನಾ ಮೆನನ್ ಬೆನ್ನಿಗೆ ನಿಂತಿದ್ದಾರೆ.
ತಮ್ಮ ಹೊಸ ಸಿನಿಮಾ ಎತುರ್ಕುಂ ತೂನಿಂದವನ್ ಸಿನಿಮಾದ ಪ್ರಚಾರದಲ್ಲಿ ಸೂರ್ಯ ಬ್ಯುಸಿಯಿದ್ದಾರೆ.. ಸಿನಿಮಾ ಪ್ರಚಾರದ ಭಾಗವಾಗಿಯೇ ಕೊಚ್ಚಿಗೆ ತೆರಳಿದ್ದ ಸೂರ್ಯ ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕೇರಳದಲ್ಲಿ ನಡೆದ ನಟಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಯಾವ ನಾಗರೀಕ ಸಮಾಜ ಒಪ್ಪಿಕೊಳ್ಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆ ನಟಿಯೊಂದಿಗೆ ನಾವೆಲ್ಲರೂ ಇದ್ದೇವೆ. ಅವರು ಧೈರ್ಯದಿಂದ ಜೀವನ ನಡೆಸಲಿ ಎಂದು ಹೇಳಿದ್ದಾರೆ.
2017ರಲ್ಲಿ ಕೇರಳದಲ್ಲಿ ನಟಿ ಭಾವನಾ ಮೇಲೆ ಹಲ್ಲೆ ನಡೆದಿತ್ತು. ಇದರ ಹಿಂದೆ ಇದ್ದಾರೆ ಎಂದು ಸ್ಟಾರ್ ನಟ ದಿಲೀಪ್ ಮೇಲೆ ಆರೋಪ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಬಂಧನ ಕೂಡ ಆಗಿತ್ತು. ಆದ್ರೆ ಇದೀಗ ಅವರಿಗೆ ಜಾಮೀನು ಸಿಕ್ಕಿ ಜೈಲಿನಿಂದ ಹೊರ ಬಂದಿದ್ದಾರೆ. ಈ ಪ್ರಕರಣ ಇದೀಗ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ.
Bengaluru Film Festival : 27 ಸಿನಿಮಾಗಳಿಗೆ ಪ್ರಶಸ್ತಿ – ‘ಯುವರತ್ನ’ಗೆ ಪಾಪ್ಯುಲರ್ ಪ್ರಶಸ್ತಿ , ‘ಹಟ್ಟಿ ಬೋರೇಗೌಡ’ ಅತ್ಯುತ್ತಮ ಸಿನಿಮಾ…!!
ಅಂದ್ಹಾಗೆ ಭಾವನಾಗೆ ಮಲಯಾಳನ ಸ್ಟಾರ್ಗಳಾದ ಮೋಹನ್ ಲಾಲ್ , ದುಲ್ಕರ್ ಸಲ್ಮಾನ್ , ಸೇರಿದಂತೆ ಅನೇಕರು ಬೆಂಬಲಿಸುತ್ತಿದ್ದು , ಇದೀಗ ೀ ಸಾಲಿಗೆ ಸೂರ್ಯ ಸೇರ್ಪಡೆಯಾಗಿದ್ಧಾರೆ.
ಇತ್ತೀಚೆಗಷ್ಟೇ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಬಹಿರಂಗವಾಗಿ ಭಾವನಾ ಮಾತನಾಡಿದ್ದರು. ಅದೊಂದು ನಕರದ ಸನ್ನಿವೇಶ. ಆ ಘಟನೆ ನಂತರ ಮಾನಸಿಕವಾಗಿ ಕುಸಿದು ಹೋಗಿದ್ದೆ ಆದರೆ ನನ್ನ ಹಿತೈಶಿಗಳು , ಕುಟುಂಬದವರು , ಆಪ್ತರು ನನಗೆ ಸಹಾಯ ಮಾಡಿ ನಾನು ಸಹಜ ಜೀವನಕ್ಕೆ ಮರಳಲು ಸಹಾಯ ಮಾಡಿದರು ಎಂದು ಬರೆದುಕೊಂಡಿದ್ದರು.. ಕನ್ನಡದಲ್ಲಿ ಭಾವನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಚ್ಚನ್ , ಭಜರಂಗಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.