ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

Shwetha by Shwetha
July 19, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬಿಡದಿ ಟೌನ್ ಶಿಪ್ ಜಟಾಪಟಿ ಈಗ ನೇರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬದ ಮನೆ ಬಾಗಿಲಿಗೆ ಬಂದು ತಲುಪಿದೆ. ರಾಜ್ಯ ಸರ್ಕಾರ ರೂಪಿಸಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಇದೀಗ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಿದ ಜಮೀನಿಗೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ದಳಪತಿಗಳ 35 ಎಕರೆ ಭೂಮಿಗೆ ಕುತ್ತು

Related posts

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

July 19, 2026
fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

July 19, 2026

ಬಿಡದಿ ಹೋಬಳಿಯ ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕುಮಾರಸ್ವಾಮಿ ಕುಟುಂಬದ ಒಟ್ಟು 35 ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ನೋಟಿಸ್ ನೀಡಿದೆ. ಇದರಲ್ಲಿ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿರುವ 31 ಎಕರೆ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿರುವ 4 ಎಕರೆ ಜಮೀನು ಸೇರಿದೆ. ರೈತರ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದ ಜೆಡಿಎಸ್ ನಾಯಕರಿಗೆ ಈಗ ಸ್ವಂತ ಭೂಮಿಯನ್ನೇ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಸರ್ಕಾರದ ಈ ಅಧಿಸೂಚನೆ ಹೊರಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಘಟಕವು ಚುರುಕಾಗಿದ್ದು, ಕುಮಾರಸ್ವಾಮಿ ಕುಟುಂಬದ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ ಮತ್ತು ಕಂದಾಯ ದಾಖಲೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ. ರೈತರ ಭೂಮಿ ಉಳಿಸುತ್ತೇವೆ ಎಂದು ಬೀದಿಯಲ್ಲಿ ಬೊಬ್ಬೆ ಹೊಡೆಯುವವರ ಜಮೀನೇ ಈಗ ಯೋಜನೆಗೆ ಒಳಪಟ್ಟಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಲೇವಡಿ ಮಾಡುತ್ತಿದ್ದಾರೆ. ಈ ದಾಖಲೆಗಳು ಈಗ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೈಲೆಂಟ್ ಸ್ಕೆಚ್

ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಮತ್ತು ವಿಶೇಷವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಯಾವುದೇ ಆರ್ಭಟವಿಲ್ಲದೆ ಗುಪ್ತವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಹಂತ ಹಂತವಾಗಿ ಪ್ರತಿಯೊಂದು ಹಳ್ಳಿಯ ಭೂಮಿಯನ್ನು ವಶಕ್ಕೆ ಪಡೆಯುತ್ತಿರುವ ಸರ್ಕಾರದ ಕ್ರಮವು ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಂದೆಡೆ ಬಿಡದಿ ಟೌನ್ ಶಿಪ್ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಪಾದಯಾತ್ರೆಯ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರವು ಸದ್ದಿಲ್ಲದೆ ಅಧಿಸೂಚನೆ ಹೊರಡಿಸಿ ಪಾದಯಾತ್ರೆಯ ಉದ್ದೇಶಕ್ಕೆ ಪೆಟ್ಟು ನೀಡಿದೆ. ಸ್ವತಃ ಮೈತ್ರಿಕೂಟದ ಪ್ರಮುಖ ನಾಯಕರ ಜಮೀನೇ ಯೋಜನೆಗೆ ಒಳಪಟ್ಟಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಇದು ಕೇವಲ ಭೂಸ್ವಾಧೀನ ಪ್ರಕ್ರಿಯೆಯೋ ಅಥವಾ ಡಿ ಕೆ ಶಿವಕುಮಾರ್ ಅವರು ಹೆಣೆದಿರುವ ರಾಜಕೀಯ ಚದುರಂಗದಾಟವೋ ಎಂಬ ಚರ್ಚೆ ಈಗ ಗಲ್ಲಿ ಗಲ್ಲಿಯಲ್ಲೂ ಶುರುವಾಗಿದೆ.

ShareTweetSendShare
Join us on:

Related Posts

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

by Shwetha
July 19, 2026
0

ಪುಣೆಯ ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣ ಈಗ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈ ಕೊಲೆಯನ್ನು ಸ್ವತಃ ಪತ್ನಿ ಸಿಯಾ ಮತ್ತು...

fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

by admin
July 19, 2026
0

*2026ರ ಫಿಫಾ ವಿಶ್ವಕಪ್ - .ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ * ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.. ದಾಖಲೆ ಬರೆಯುವುದನ್ನು ಕೈಲಿಯನ್ ಎಂಬಾಪೆ ಮರೆಯಲಿಲ್ಲ..!...

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ  ಬೆವರಿಳಿಸಿದ ಲವ್ಲಿ ಸ್ಟಾರ್

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ ಬೆವರಿಳಿಸಿದ ಲವ್ಲಿ ಸ್ಟಾರ್

by Shwetha
July 19, 2026
0

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಮತ್ತು ಐಷಾರಾಮಿ ಸೌಲಭ್ಯಗಳ ಕುರಿತು ವ್ಯಕ್ತವಾಗಿರುವ ಅನಾಮಧೇಯ ಲೇಖನಕ್ಕೆ ನಟ ನೆನಪಿರಲಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸದೆ...

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

by Shwetha
July 19, 2026
0

ಬಿಡದಿ ಉಪನಗರ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಮಾಗಡಿಯ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿಗಳಾದ...

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

by Shwetha
July 19, 2026
0

20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿಜ್ಞಾನಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿರುವ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಮಹತ್ವದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram