ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ ಬೆವರಿಳಿಸಿದ ಲವ್ಲಿ ಸ್ಟಾರ್

Shwetha by Shwetha
July 19, 2026
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಮತ್ತು ಐಷಾರಾಮಿ ಸೌಲಭ್ಯಗಳ ಕುರಿತು ವ್ಯಕ್ತವಾಗಿರುವ ಅನಾಮಧೇಯ ಲೇಖನಕ್ಕೆ ನಟ ನೆನಪಿರಲಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸದೆ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಮಾತನಾಡುವ ನಿರ್ಮಾಪಕರ ನಡೆಯನ್ನು ಅವರು ಲೇವಡಿ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದ್ದು ಲವ್ಲಿ ಸ್ಟಾರ್ ಪ್ರೇಮ್ ನೀಡಿದ ಖಡಕ್ ಉತ್ತರ ಈಗ ವೈರಲ್ ಆಗಿದೆ.

ಧೈರ್ಯವಿದ್ದರೆ ಹೆಸರು ಹೇಳಿಕೊಂಡು ಬರಲಿ

Related posts

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

July 19, 2026
ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

July 19, 2026

ಸ್ಟಾರ್ ನಟರು ಸಂಭಾವನೆ ಕಡಿಮೆ ಮಾಡಬೇಕು ಎಂದು ಪತ್ರಿಕೆಯಲ್ಲಿ ಲೇಖನ ಬರೆದ ಆ ನಿರ್ಮಾಪಕ ಮೊದಲು ತನ್ನ ಹೆಸರನ್ನು ಬಹಿರಂಗಪಡಿಸಲಿ ಎಂದು ಪ್ರೇಮ್ ಸವಾಲು ಹಾಕಿದ್ದಾರೆ. ಹೆಸರಿಲ್ಲದ ಅಭಿಪ್ರಾಯಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಅಂತಹ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರು ಗರಂ ಆಗಿದ್ದಾರೆ. ನಟರ ವಿರುದ್ಧ ಗುರಿ ಮಾಡುವ ಮೊದಲು ಮುಖಾಮುಖಿಯಾಗಿ ಮಾತನಾಡುವ ಧೈರ್ಯ ತೋರಿಸಲಿ ಎಂದು ಕಿಡಿಕಾರಿದ್ದಾರೆ.

ಹೀರೋಗಳ ಸ್ಥಿತಿ ನಮಗೂ ಗೊತ್ತು ಸಂಭಾವನೆ ಅಡ್ಜಸ್ಟ್‌ಮೆಂಟ್‌ನಲ್ಲೇ ಇದೆ

ಇಂದಿನ ಚಿತ್ರರಂಗದ ಕಷ್ಟದ ಪರಿಸ್ಥಿತಿ ಎಲ್ಲ ನಟರಿಗೂ ತಿಳಿದಿದೆ. ಯಾರೂ ಕೂಡ ಇಂತಿಷ್ಟೇ ಹಣ ಬೇಕು ಎಂದು ಹಠ ಹಿಡಿಯುತ್ತಿಲ್ಲ. ಮೊದಲು ಅಡ್ವಾನ್ಸ್ ಕೊಡಿ ಸಿನಿಮಾ ಬಿಸಿನೆಸ್ ಆದ ಮೇಲೆ ಬಾಕಿ ಹಣ ಕೊಡಿ ಎಂದು ಹೇಳುವ ಮಟ್ಟಕ್ಕೆ ನಟರು ಸಹಕಾರ ನೀಡುತ್ತಿದ್ದಾರೆ. ಚಿತ್ರರಂಗದ ಲಾಭ ನಷ್ಟದ ಬಗ್ಗೆ ಅರಿವಿದ್ದೇ ಸಿನಿಮಾಗಳು ನಡೆಯುತ್ತಿವೆ. ಹೀಗಿರುವಾಗ ನಟರ ಮೇಲೆ ಗೂಬೆ ಕೂರಿಸುವುದು ಸತ್ಯಕ್ಕೆ ದೂರವಾದ ಮಾತು ಎಂದು ಪ್ರೇಮ್ ಸ್ಪಷ್ಟಪಡಿಸಿದ್ದಾರೆ.

ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಚಿತ್ರರಂಗಕ್ಕೆ ಲಾಭವಿಲ್ಲ

ಕೇವಲ ನಾಲ್ಕೈದು ಜನ ಗೆದ್ದಿರುವ ನಟರ ಹಿಂದೆ ಓಡುವ ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ದೊಡ್ಡ ಲಾಭವಿಲ್ಲ ಎಂದು ಪ್ರೇಮ್ ವಾಗ್ದಾಳಿ ನಡೆಸಿದ್ದಾರೆ. ನಿಜವಾಗಿಯೂ ಚಿತ್ರರಂಗ ಬದುಕಿರುವುದು ಸಣ್ಣ ನಿರ್ಮಾಪಕರು ಮತ್ತು ಹೊಸ ಕಲಾವಿದರಿಂದ. ತಮ್ಮನ್ನು ತಾವು ದೊಡ್ಡವರೆಂದು ಕರೆದುಕೊಳ್ಳುವವರು ಕೇವಲ ಗೆದ್ದ ಕುದುರೆಯ ಮೇಲೆ ಹಣ ಕಟ್ಟುತ್ತಾರೆ. ಉಳಿದ ನಟರು ಮತ್ತು ತಂತ್ರಜ್ಞರ ಜೊತೆ ಸಿನಿಮಾ ಮಾಡುವ ಮನಸ್ಸು ಇವರಿಗೆ ಯಾಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಕ್ಯಾರವ್ಯಾನ್ ಸೌಲಭ್ಯ ಐಷಾರಾಮಿ ಅಲ್ಲ ಅದು ಅನಿವಾರ್ಯ

ಹಳೆಯ ಕಾಲದ ನಟರಿಗೆ ಇಲ್ಲದ ಕ್ಯಾರವ್ಯಾನ್ ಈಗಿನವರಿಗೆ ಬೇಕೆ ಎಂಬ ಟೀಕೆಗೆ ಪ್ರೇಮ್ ತರ್ಕಬದ್ಧವಾಗಿ ಉತ್ತರಿಸಿದ್ದಾರೆ. ಡಾ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಕಾಲದಲ್ಲಿ ಶೇಕಡಾ 90 ರಷ್ಟು ಚಿತ್ರೀಕರಣ ಸ್ಟುಡಿಯೋಗಳಲ್ಲಿ ನಡೆಯುತ್ತಿತ್ತು. ಅಲ್ಲಿ ಗ್ರೀನ್ ರೂಮ್ ಸೌಲಭ್ಯವಿತ್ತು. ಆದರೆ ಇಂದು ಹಳ್ಳಿಗಳಲ್ಲಿ ಕಾಡುಗಳಲ್ಲಿ ಮತ್ತು ರಸ್ತೆಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲಿ ಮಹಿಳಾ ಕಲಾವಿದರು ಮತ್ತು ನಟರು ಕನಿಷ್ಠ ಶೌಚಾಲಯದ ಸೌಲಭ್ಯಕ್ಕಾಗಿ ಯಾರ ಮನೆಗಾದರೂ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕ್ಯಾರವ್ಯಾನ್ ಎಂಬುದು ಕೇವಲ ಸ್ಟೈಲ್ ಅಲ್ಲ ಅದು ಕಲಾವಿದರ ಅನಿವಾರ್ಯತೆ ಎಂದು ತಿಳಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಹಾವಳಿ ಎಲ್ಲರಿಗೂ ಇಲ್ಲ

ಎಲ್ಲ ಹೀರೋಗಳು ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಹೋಗುತ್ತಿದ್ದಾರೆ ಎಂಬುದು ತಪ್ಪು ಕಲ್ಪನೆ. ವರ್ಷಕ್ಕೆ ಎಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ ಎಂದು ಲೆಕ್ಕ ಕೊಡಿ ಎಂದು ಪ್ರೇಮ್ ಕೇಳಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಆ ಸಾಲಿಗೆ ಸೇರುತ್ತವೆ. ಉಳಿದವರೆಲ್ಲಾ ಕನ್ನಡ ಚಿತ್ರರಂಗದ ಮಾರುಕಟ್ಟೆಗೆ ಅನುಗುಣವಾಗಿಯೇ ಕೆಲಸ ಮಾಡುತ್ತಿದ್ದಾರೆ. ಚರ್ಚೆ ಮಾಡಲು ನಾವು ಸದಾ ಸಿದ್ಧವಿದ್ದೇವೆ ಆದರೆ ಟೀಕೆ ಮಾಡುವವರು ಮೊದಲು ತಮ್ಮ ಹೆಸರನ್ನು ಬಹಿರಂಗಪಡಿಸಲಿ ಎಂದು ಪ್ರೇಮ್ ಗುಡುಗಿದ್ದಾರೆ.

ShareTweetSendShare
Join us on:

Related Posts

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

ಈಕೆ ಹೆಣ್ಣಲ್ಲ ಹೆಮ್ಮಾರಿ – ಮದುವೆ ಹೆಸರಲ್ಲಿ ಮೃತ್ಯು : ಪ್ಲಾನ್ ಬಿ ಮೂಲಕ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ರಾಕ್ಷಸಿ -ಕೇತನ್ ಕೊಲೆ ಕೇಸ್ ಗೆ ಭೀಕರ ಟ್ವಿಸ್ಟ್

by Shwetha
July 19, 2026
0

ಪುಣೆಯ ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣ ಈಗ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈ ಕೊಲೆಯನ್ನು ಸ್ವತಃ ಪತ್ನಿ ಸಿಯಾ ಮತ್ತು...

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

by Shwetha
July 19, 2026
0

ಬಿಡದಿ ಟೌನ್ ಶಿಪ್ ಜಟಾಪಟಿ ಈಗ ನೇರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬದ ಮನೆ ಬಾಗಿಲಿಗೆ ಬಂದು ತಲುಪಿದೆ. ರಾಜ್ಯ ಸರ್ಕಾರ ರೂಪಿಸಿರುವ...

fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

by admin
July 19, 2026
0

*2026ರ ಫಿಫಾ ವಿಶ್ವಕಪ್ - .ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ * ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.. ದಾಖಲೆ ಬರೆಯುವುದನ್ನು ಕೈಲಿಯನ್ ಎಂಬಾಪೆ ಮರೆಯಲಿಲ್ಲ..!...

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

by Shwetha
July 19, 2026
0

ಬಿಡದಿ ಉಪನಗರ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಮಾಗಡಿಯ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿಗಳಾದ...

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

by Shwetha
July 19, 2026
0

20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿಜ್ಞಾನಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿರುವ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಮಹತ್ವದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram