ಬಿಗ್ ಬಾಸ್ ಖೇಲ್ : ಕಹಾನಿ ಮೇ ಟ್ವಿಸ್ಟ್…! ಮೊದಲ ದಿನ ಸೇಫ್ ಅದ್ರೂ ಡೇಜಂರ್ ಝೋನ್ ಗೆ ಹೋಗಿದ್ಯಾಕೆ ಶುಭಾ..!
ಬಿಗ್ ಸೀಸನ್ 8 ಆರಂಭವಾಗಿ ಈಗಾಗಲೇ ಇಂದಿಗೆ 4 ದಿನವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಣ್ಣೀರಿಟ್ಟಿರೋದು ಕಂಡು ಬಂದಿದೆ. ಸ್ಪರ್ಧಿಗಳ ನಡುವೆ ಫೈಟ್ ಕೂಡ ಆರಂಭವಾಗಿದೆ. ಈ ನಡುವೆ ದೊಡ್ಮನೆಯಲ್ಲಿ ಬಿಗ್ ಬಾಸ್ ಖೇಲ್ ಗೆ ಸ್ಪರ್ಧಿಗಳು ಪೇಚಿಗೆ ಸಿಲುಕಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿರೋ ಬಿಗ್ ಬಾಸ್ ರಣತಂತ್ರಕ್ಕೆ ದೊಡ್ಮನೆ ಶೇಖ್ ಆಗಿದೆ.
ಹೌದು ಮೊದಲನೇ ದಿನ ಎಲಿಮೇನೇಷನ್ ರೌಂಡ್ ಗೆ ನಾಮಿನೇಟ್ ಆಗಿದ್ದವರು 2ನೇ ದಿನಕ್ಕೆ ಸೇಫ್ ಆದ್ರೂ. ಪ್ರಶಾಂತ್ ಸಂಬರ್ಗಿ, ಧನುಶ್ರಿ, ಲ್ಯಾಗ್ ಮಂಜು, ನಿಧಿ ಸುಬ್ಬಯ್ಯ ಅವರು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ಆದ್ರೆ ಬಿಗ್ ಬಾಸ್ ಕೊಟ್ಟ ಅವಕಾಶವನ್ನ ಬಳಸಿಕೊಂಡ ಪ್ರಶಾಂತ್ ಸಂಬರ್ಗಿ ತಮ್ಮ ಮೇಲಿನ ನಾಮಿನೇಷನ್ ಕತ್ತಿಯನ್ನ ವಿಶ್ವನಾಥ್ ಗೆ ವರ್ಗಾವಣೆ ಮಾಡಿದ್ರು. ಇತ್ತ ಪಾವಗಡ ಮಂಜು ರಘುನ ಡೇಂಜರ್ ಝೋನ್ ಗೆ ನೂಕಿ ಸೇಫ್ ಆದ್ರು. ಮತ್ತೊಂದ್ ಕಡೆ ಮೊಗ್ಗಿನ ಮನಸ್ಸಿನ ಬೆಡಗಿ ನಿಧಿ ಸುಬ್ಬಯ್ಯ ಬದಲು ಡೇಂಜರ್ ಝೋನ್ ಗೆ ಧುಮುಕಿದ್ದಾರೆ.
ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!
ಆಟದಲ್ಲಿ ನಿಧಿ ಅವರು ಶುಭಾ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡು ಸೋಲಿಸಿದರು. ಬಳಿಕ ನಾಮಿನೇಷನ್ ಕತ್ತಿಯನ್ನ ಶುಬಾಗೆ ವರ್ಗಾವಣೆ ಮಾಡಿದ್ರು. ಆ ಮೂಲಕ ನಿಧಿ ಅವರು ನಾಮಿನೇಟ್ನಿಂದ ಬಚಾವಾದರು. ಶುಭಾ ಪೂಂಜಾ ಡೇಂಜರ್ ಝೋನ್ ಗೆ ಕಾಲಿಟ್ಟರು. ಈ ಮೂಲಕ ಈ ವಾರದ ಎಲಿಮೇಷನ್ ರೌಂಡ್ ಗೆ ರಘು ಗೌಡ, ವಿಶ್ವ, ಶುಭಾ ಪೂಂಜಾ, ಧನುಶ್ರಿ ಹಾಗೂ ನಿರ್ಮಲಾ ಅವರು ನಾಮಿನೇಟ್ ಆಗಿದ್ದಾರೆ. ಸದ್ಯ ಮೊದಲ ವಾರವೇ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಲಿದ್ದಾರೆ. ಜನ ಯಾರ ಕೈಬಿಡ್ತಾರೆ. ಯಾರ ಕೈ ಹಿಡಿಯಲಿದ್ದಾರೆ ಅನ್ನೋದನ್ನ ವೀಕೆಂಡ್ ವರೆಗೂ ಕಾದು ನೋಡಬೇಕಾಗಿದೆ.
‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..?