ಡಿಕೆಶಿ ಸಿಎಂ ಆದರೆ ನನ್ನ ಬೆಂಬಲ ಎಂಬ ಹೆಚ್ ಡಿ ಕೆ ಹೇಳಿಕೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ ಈ ಬಗ್ಗೆ ಅವರನ್ನೇ ಕೇಳಿ.ನಾನು ಮಾತನಾಡಲು ಹೋಗಲ್ಲ ಎಂದಿದ್ದಾರೆ..
ಕಾಂಗ್ರೆಸ್ ಬಳ್ಳಾರಿ ಪಾದಯಾತ್ರೆ ರೀತಿ ಮಡಿಕೇರಿ ಚಲೋ ಕೂಡಾ ಹೊಸ ಸಂಚಲನ ಸೃಷ್ಟಿ ಮಾಡುತ್ತೆ ಎಂಬ ಚರ್ಚೆ ನಡೆದಿರೋ ವಿಚಾರವಾಗಿ ಮಾತನಾಡ್ತಾ 2013 , 2023 ಆಗಲು ಸಾಧ್ಯವಿಲ್ಲ, ಅವರ ಆಡಳಿತ ನೋಡಿಯೇ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ ಎಂದಿದ್ದಾರೆ.
ಇನ್ನೂ ಸಂಪುಟ ಪುನಾರಚನೆ ಮಾಡುವಂತೆ ಸಚಿವಾಕಾಂಕ್ಷಿಗಳ ಬೇಡಿಕೆ ವಿಚಾರವಾಗಿ ಮಾತನಾಡ್ತಾ ಅದು ನಮ್ಮ ಪಕ್ಷದ ಆಂತರಿಕ ವಿಚಾರ , ಎಲ್ಲವನ್ನು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದಿದ್ದಾರೆ..
ಇನ್ನೂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಸಂಪತ್ ಗೆ ಜೀವ ಬೆದರಿಕೆ ಬಂದ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದು , ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗ್ತಿದೆ, ಸಿದ್ದರಾಮಯ್ಯಗೂ ಜೀವ ಬೆದರಿಕೆ ಬಂದಿದೆ ಅಂತ ಸುದ್ದಿ ನಿಮ್ಮಲ್ಲೇ ಬಂದಿದೆ , ಅದರ ಬಗ್ಗೆ ಸಂಪೂರ್ಣ ತನಿಖೆ ನಡೆದಿದೆ, ಜೀವ ಬೆದರಿಕೆ ಸೇರಿದಂತೆ ಎಲ್ಲವನ್ನೂ ಕೂಲಂಕಷವಾಗಿ ತನಿಖೆ ಮಾಡ್ತೀವಿ ಎಂದಿದ್ದಾರೆ..








