ಇದೇ ತಿಂಗಳ 28ಕ್ಕೆ ಬಿಜೆಪಿ ಜನೋತ್ಸವ ಸಮಾವೇಶ – ಸುಧಾಕರ್
ಇದೇ ತಿಂಗಳು 28 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸಮಾವೇಶ ನಡೆಸಲು ಪಕ್ಷದಿಂದ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲ ಪ್ರದೇಶಗಳಿಂದ ಮಾತ್ರ ಜನರು ಪಾಲ್ಗೊಳ್ಳಲಿದ್ದಾರೆ. ಉಳಿದ ರೂಪರೇಷೆ ನಡೆಯುತ್ತಿದೆ. ನೆರೆ ಬಂದಾಗ ರಾಜ್ಯ ಸರ್ಕಾರ ಯಾವುದೇ ಸಮಾವೇಶ ನಡೆಸದೆ ಪರಿಹಾರ ಕಾರ್ಯ ಕೈಗೊಂಡಿದೆ.
ರಾಜ್ಯ ಸರ್ಕಾರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಕೋವಿಡ್ನ ಎರಡೂ ಡೋಸ್ ಲಸಿಕೆಯನ್ನು 100% ನೀಡಲಾಗಿದೆ. ಇದು ಜನರ ಉತ್ಸವವಾಗಿ ನಡೆಯಬೇಕೆಂದು ಬಿಜೆಪಿ ಬಯಸಿದೆ. ಸಿದ್ದರಾಮೋತ್ಸವ ಆದ ಬಳಿಕ ಬಿಜೆಪಿಯಿಂದ ಜನೋತ್ಸವ ಏರ್ಪಡಿಸಿಲ್ಲ. ಅದಕ್ಕೂ ಮುನ್ನವೇ ಜನೋತ್ಸವ ಏರ್ಪಡಿಸಲಾಗಿತ್ತು. ಆದರೆ ಕಾರ್ಯಕರ್ತನ ಕೊಲೆ ಆಗಿದ್ದರಿಂದ ರದ್ದು ಮಾಡಲಾಯಿತು ಎಂದರು.
BJP Janotsava convention on 28th of this month – Sudhakar