ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ, ಅವರ ಸಾವಿನ ಸುದ್ದಿ ಇಡೀ ದೇಶಾದ್ಯಂತ ಹಲ್ ಚಲ್ ಸೃಷ್ಟಿಸಿತ್ತು. ಕೆಲವರು ಇದು ಆತ್ಮಹತ್ಯೆ ಅಂದ್ರೆ, ಇನ್ನೂ ಹಲವರು ಕೊಲೆ ಎಂದು ವಾದಿಸುತ್ತಲೇ ಬಂದಿದ್ದು, ಈ ಚರ್ಚೆ, ವಾದ, ಆರೋಪಗಳಿಗೆ ಸುಶಾಂತ್ ಸಿಂಗ್ ದೇಹದ ಒಳಾಂಗಗಳ ಸೂಕ್ಷ್ಮ ಪರೀಕ್ಷೆ ಇತಿಶ್ರೀ ಹಾಡಿದೆ. ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆಯ ಜೊತೆಗೆ ಒಳಾಂಗಗಳ ಪರೀಕ್ಷೆ ಮಾಡಲಾಗಿತ್ತು. ಅದರ ವರದಿ ಇದೀಗ ಹೊರಬಿದ್ದಿದ್ದು, ಎಲ್ಲಾ ಅನುಮಾನಕ್ಕೆ ವಿರಾಮವಿಟ್ಟಿದೆ. ಸುಶಾಂತ್ ಸಿಂಗ್ ಮೃತದೇಹದ ವಿಸ್ಸೆರಾ ವರದಿ ಪ್ರಕಾರ ಸುಶಾಂತ್ ಸಾವು ಆತ್ಮಹತ್ಯೆಯಿಂದಲೇ ಎಂಬುವುದು ಸಾಬೀತಾಗಿದೆ. ಇನ್ನಷ್ಟು ಸ್ಪಷ್ಟನೆಗಾಗಿ ಉಗುರು ಮತ್ತು ಹೊಟ್ಟೆಯ ಭಾಗಗಳ ಪರೀಕ್ಷೆ ಬಲವಂತದ ಉಸಿರುಗಟ್ಟಿಸುವಿಕೆ ನಡೆದಿರಬಹುದಾದ ಅನುಮಾನದ ಮೇರೆಗೆ ಸುಶಾಂತ್ ಅವರ ಉಗುರು, ಹೊಟ್ಟೆ ಭಾಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಅದರ ವರದಿ ಇನ್ನಷ್ಟೆ ಬರಬೇಕಿದೆ.
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








