ಪಶ್ಚಿಮ ಬಂಗಾಳ ಹಿಂಸಾಚಾರ 8 ಬಲಿ – ಹೈಕೋರ್ಟ್ ಸ್ವಂ ಪ್ರೇರಿತ ವಿಚಾರಣೆ
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಎಂಟು ಜೀವಗಳನ್ನು ಬಲಿ ಪಡೆದ ಹಿಂಸಾಚಾರದ ಕೃತ್ಯವನ್ನ ಕಲ್ಕತ್ತಾ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿ ವಿಚಾರಣೆ ಕೈಜಗೆತ್ತಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರನ್ನೊಳಗೊಂಡ ಪೀಠವು ಮಧ್ಯಾಹ್ನ 2 ಗಂಟೆಯಿಂದ ವಿಚಾರಣೆ ನಡೆಸಲಿದೆ.
ಮಂಗಳವಾರ ಮುಂಜಾನೆ ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಎಂಟು ಜನರು ಸುಟ್ಟು ಕರಕಲಾದರು. ಈ ಘಟನೆಯ ಹಿಂದೆ ಆಡಳಿತಾರೂಢ ಟಿಎಂಸಿ ಪಂಚಾಯತ್ ಅಧಿಕಾರಿಯ ಕೃತ್ಯದ ಬಗ್ಗೆ ಶಂಕಿಸಲಾಗಿದೆ.
ವಕೀಲ ತರುಣ್ ಜ್ಯೋತಿ ತಿವಾರಿ ಅವರು ಮಂಗಳವಾರ ಅವರು ಮತ್ತು ಬಿಜೆಪಿ ವಕೀಲರ ಸೆಲ್ನ ಇತರ ಒಂಬತ್ತು ಮಂದಿ ವಿಭಾಗೀಯ ಪೀಠದ ಮುಂದೆ ಘಟನೆಯ ಬಗ್ಗೆ ಪ್ರಸ್ತಾಪಿಸಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದ್ದಾರೆ. ಪೀಠವು ಅವರಿಗೆ ಅನುಮತಿ ನೀಡಿದೆ ಮತ್ತು ಶೀಘ್ರದಲ್ಲೇ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ತಿವಾರಿ ಹೇಳಿದ್ದಾರೆ.