Car accident : ರಿಷಬ್ ಪಂತ್ ರನ್ನು ಮುಂಬೈಗೆ ಸ್ಥಳಾಂತರ ಚಿಂತನೆ
ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನ ಡೆಹ್ರಾಡೂನ್ನಿಂದ ಮುಂಬೈಗೆ ಸ್ಥಳಾಂತರಿಸಲು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಸಜ್ಜಾಗಿದೆ.
ಕಳೆದ ಡಿಸೆಂಬರ್ 30ರಂದು ಸಂಭವಿಸಿದ ಕಾರು ಅಪಘಾತದಲ್ಲಿ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದರು. ಪಂತ್ ಅವರನ್ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ನಡುವೆ ಬಿಸಿಸಿಐನ ವೈದ್ಯರ ತಂಡ ರಿಷಬ್ ಪಂತ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ನಿಗಾವಹಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಅಥವಾ ವಿದೇಶಕ್ಕೆ ವರ್ಗಾಯಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ರಿಷಬ್ ಪಂತ್ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಡೆಹ್ರಾಡೂನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಅಪಘಾತದಲ್ಲಿ ಪಂತ್ ಅವರ ಹಣೆ, ಮೊಣಕಾಲು ಭಾಗದಲ್ಲಿ ಅತ್ಯಂತ ಗಂಭೀರವಾದ ಗಾಯಗಳಾಗಿದ್ದು, ಬಲ ಮಣಿಕಟ್ಟು, ಪಾದ ಮತ್ತು ಬೆನ್ನಿನ ಮೇಲೆ ಸವೆತದ ಗಾಯಗಳಿಂದ ಬಳಲುತ್ತಿದ್ದಾರೆ. ಈ ನಡುವೆ ಪಂತ್ ಅವರ ಕಣ್ಣೀರಿನ ಚಿಕಿತ್ಸೆ ನಿರ್ವಹಿಸಲು ಬಿಸಿಸಿಐ ನೋಡುತ್ತಿದ್ದು, ಭಾರತ ಕ್ರಿಕೆಟಿಗನ ಆರೋಗ್ಯ ಚೇತರಿಕೆ ಬಗ್ಗೆ ಬಿಸಿಸಿಯ ಮೇಲ್ವಿಚಾರಣೆವಹಿಸಿದೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ಡಿ.30ರಂದು ನಸುಕಿನಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿ ಮಾರ್ಗವಾಗಿ ತಮ್ಮ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ರೋಡ್ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದು, ಬೆಂಕಿಗೆ ಆಹುತಿಯಾಗಿತ್ತು. ಪರಿಣಾಮ ಕಾರಿನ ಒಳಗೆ ಸಿಲುಕಿದ್ದ ಪಂತ್, ಕಾರಿನ ವಿಂಡ್ ಶೀಲ್ಡ್ ಮುರಿದು ಕಾರಿನಿಂದ ಹೊರ ಬಂದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪಂತ್ ಅವರನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.








