ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ರೈತರು ಹಾಗೂ ಕುಡಿಯುವ ನೀರಿಗೆ ಜನರು ಪರದಾಟ ನಡೆಸುವಂತಾಗಿದೆ.
ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬಹುತೇಕ ಡ್ಯಾಂಗಳು(Karnataka Dams) ಖಾಲಿ ಖಾಲಿಯಾಗಿಯೇ ಇವೆ. ಕೆಆರ್ಎಸ್ ಡ್ಯಾಂನಲ್ಲಿ(KRS Dam) ಇಂದಿಗೆ 89 ಅಡಿ ನೀರು ಸಂಗ್ರಹ ಇದೆ. ಡ್ಯಾಂ ಗೆ 1711 ಕ್ಯೂಸೆಕ್ ನೀರು ಒಳ ಹರಿವಿದೆ. ಕಾವೇರಿ ನದಿಯಲ್ಲಿ ನೀರಿನ ಕೊರತೆ ಕಂಡು ಬಂದಿದ್ದು, ನದಿಯಲ್ಲಿ ನೀರಿನ ಮಟ್ಟ ತಳಕ್ಕೆ ಸೇರಿದೆ. ಹೀಗಾಗಿ ನದಿಯಲ್ಲಿ ನಡೆಯುತ್ತಿದ್ದ ಅಸ್ತಿ ವಿಸರ್ಜನೆ, ಪಿಂಡ ಪ್ರಧಾನಗಳಂತಹ ಧಾರ್ಮಿಕ ಕಾರ್ಯಗಳ ಮೇಲೆಯೂ ಪರಿಣಾಮ ಬೀರುತ್ತಿದೆ.
ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿದ್ದ ಪಶ್ಚಿಮ ವಾಹಿನಿಯಲ್ಲಿ ಇಂದು ಜನರೇ ಇಲ್ಲದಂತಾಗಿದೆ. ಬೆರಳೆಣಿಕೆಯಷ್ಟು ಜನ ಮಾತ್ರ ಪಿಂಡ ಪ್ರಧಾನ ಮಾಡುವುದು ಅಸ್ತಿ ವಿಸರ್ಜನೆ ಮಾಡುವುದನ್ನು ಮಾಡುತ್ತಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿಯಾದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಜನರ ಸಂಖ್ಯೆ ಕುಸಿದಿದೆ. ಧಾರ್ಮಿಕ ಕಾರ್ಯಗಳಿಗೆ ಬರುವ ಜನರು ಸ್ನಾನ ಮಾಡಲು ನದಿಯಲ್ಲಿ ನೀರಿನ ಕೊರತೆ ಎದುರಾಗಿದೆ. ಇರುವ ಕಡಿಮೆ ನೀರಿನಲ್ಲೇ ತಮ್ಮವರ ಹೆಸರಿನಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸಿ ತಲೆ ಮೇಲೆ ಚಂಬಿನಿಂದ ನೀರು ಹಾಕುತ್ತಿದ್ದಾರೆ. ಕಾವೇರಿ ಕೂಡ ಬರಿದಾಗಿದ್ದಕ್ಕೆ ಜನರು ನೋವು ಅನುಭವಿಸುತ್ತಿದ್ದಾರೆ.