ಜಮೀನಿಗೆ ನುಗ್ಗಿದ ಕಾಲುವೆ ನೀರು : ನೀರಿನಲ್ಲಿ ಸಿಕ್ಕಿ ಕುರಿ ಸಾವು
ವಿಜಯಪುರ : ಜಮೀನೊಂದಕ್ಕೆ ಕಾಲುವೆ ನೀರು ನುಗ್ಗಿ, ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದ ರೈತ ಕಂಗಾಲಾಗಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ನಡೆದಿದೆ. ಕಾಲುವೆ ನೀರನ ರಭಸಕ್ಕೆ ಕುರಿಯೊಂದು ಕೊಚ್ಚಿ ಹೋಗಿದೆ.
ಇಲಾಖೆಗಳಲ್ಲಿನ ಎಲ್ಲ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯ – ನಿತಿನ್ ಗಡ್ಕರಿ
ಮುಳವಾಡ ಏತ ನೀರಾವರಿ ಯೋಜನೆಯ ಹೂವಿನಹಿಪ್ಪರಗಿ ಶಾಖಾ ಉಪ ಕಾಲುವೆಯಲ್ಲಿ ಇಂತಹ ಘಟನೆ ನಡೆದಿದೆ. ಜಮೀನಿನಲ್ಲಿದ್ದ ಜೋಳ, ಕಡಲೆ, ಗೋಧಿ ಬೆಳೆಗೆ ಕಾಲುವೆ ನೀರಿನಿಂದ ಹಾನಿಯಾಗಿದೆ. ಕಾಲುವೆ ನೀರಲ್ಲಿ ಸಿಲುಕಿ ಕುರಿ ಸಾವನಪ್ಪಿದೆ. ಇತ್ತ ಮಣ್ಣು ಕೊಚ್ಚಿ ಹೋಗಿರುವ ಜಮೀನಿನ ಮಾಲೀಕರು ಸೂಕ್ತ ಪರಿಹಾರಕ್ಕಾಗಿ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳು ಕಾಲುವೆ ನೀರು ತಡೆಹಿಡಿದಿದ್ದಾರೆ.