ಗಣಿನಾಡು ಬಳ್ಳಾರಿಯಲ್ಲೂ ಇಂದಿನಿಂದ ಸಿಗೋದಿಲ್ಲಾ ಕೊವೀಡ್ ರಿಪೋರ್ಟ್..!
ಕೇಂದ್ರ ಸರ್ಕಾರದ ನೀತಿಯಂತೆ ಕರ್ನಾಟಕದಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ ನೀಡುವಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ವೇತನ ನೀಡುವಂತೆ ಆಗ್ರಹಸಿ ವೈದ್ಯರು ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದಾರೆ. ಅದರಂತೆ ಗಣಿನಾಡು ಬಳ್ಳಾರಿಯಲ್ಲಿಯೂ ವೈದ್ಯರು ಮುಷ್ಕರ ಕೈಗೊಂಡಿದ್ದು, ಇಂದಿನಿಂದ ಕೋವಿಡ್ ರಿಪೋರ್ಟ್ ಸಿಗುವುದಿಲ್ಲ. ಈಗಾಗಲೇ ಬಳ್ಳಾರಿ ಡಿಸಿ ಮೂಲಕ ಈ ಕುರಿತು ರಾಜ್ಯ ಸರ್ಕಾರಕ್ಕೆ ಸರ್ಕಾರಿ ವೈದ್ಯರು ಮನವಿ ಸಲ್ಲಿಸಿದ್ದಾರೆ.
ಅಕ್ಟೋಬರ್ 1ಕ್ಕೆ ತೆರೆಯುತ್ತಾ ಚಿತ್ರಮಂದಿರಗಳು….?
ಅಕ್ಟೋಬರ್ 1 ರಿಂದ ದೇಶಾದ್ಯಂತ ಸಿನಿಮಾ ಮಂದಿರಗಳನ್ನು ತೆರೆಯಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಸಿನಿಪ್ರಿಯರಿಗೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ. ಇನ್ನೇನೂ ಚಿತ್ರಮಂದಿರಗಳು ತೆರೆಯಲು ತಯಾರಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈ ಸುದ್ದಿ ಸುಳ್ಳು ಎಂದು ಸುದ್ದಿಸಂಸ್ಥೆಯೊಂದು ಮಾಹಿತಿ ಬಹಿರಂಗಪಡಿಸಿದೆ. ಹೌದು ಸದ್ಯಕ್ಕೆ ಚಿತ್ರಮಂದಿರಗಳ ತೆರೆಯಲು ಯಾವುದೇ ನಿರ್ಧಾರವಿಲ್ಲ ಇದುವರೆಗೂ ಕೇಂದ್ರ ಗೃಹ ಇಲಾಖೆ ಕಡೆಯಿಂದ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗ್ತಿದೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ
ಚೆನ್ನೈ : ಕೊರೊನಾ ಹಾಗೂ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರ ಚರಣ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಪುತ್ರ ಚರಣ್, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲಾ ತರಹದ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಇನ್ನೂ ಅವರಿಗೆ ಆಹಾರವನ್ನು ನೇರವಾಗಿಯೇ ನೀಡಲಾಗುತ್ತಿದೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.
ಉಪ್ಪಿ ಬರ್ತ್ ಡೇ ಗೆ ಕಬ್ಜ ಥೀಮ್ ಪೋಸ್ಟರ್ ರಿಲೀಸ್..!
ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಕಬ್ಜ ಚಿತ್ರತಂಡದಿಂದ ಉಪೇಂದ್ರ ಥೀಮ್ ಪೋಸ್ಟರ್ ಬಿಡುಗಡ ಮಾಡಲು ತಯಾರಿ ನಡೆಸಿಕೊಳ್ಲಲಾಗಿದೆ. ಈ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುತ್ತಿದೆ. ಥೀಮ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸೆಪ್ಟೆಂಬರ್ 17ರ ಸಂಜೆ 5 ಕ್ಕೆ ಬಿಡುಗಡೆ ಮಾಡಲಿದ್ದಾರೆ.
ವೈದ್ಯರ ಪ್ರತಿಭಟನೆ : ಆರೋಗ್ಯ ಸಚಿವರು ಹೇಳಿದ್ದೇನು..?
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ವೈದ್ಯರು ಇಂದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀ ರಾಮುಲು ಪ್ರತಿಕ್ರಿಯಿಸಿ, ವೈದ್ಯರು ಮುಷ್ಕರ ಕೈ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ರಾಮುಲು, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ವೈದ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಮುಷ್ಕರಕ್ಕೆ ಹೋದರೆ ಜನರಿಗೆ ಸಮಸ್ಯೆ ಆಗುತ್ತದೆ. ಹಾಗಾಗಿ ವೈದ್ಯರು ಮುಷ್ಕರ ಕೈ ಬಿಡಬೇಕು ಎಂದು ವಿನಂತಿಸಿಕೊಂಡರು.
ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಬದ್ಧ : ಬಿಎಸ್ ವೈ
ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಆದಷ್ಟು ಶೀಘ್ರ ಸ್ಮಾರಕದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬಿಎಸ್ ಯಡಿಯೂರಪ್ಪ ಅವರು ಆನ್ ಲೈನ್ ಮೂಲಕ ದಿ.ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಡಾ. ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ವಿಷ್ಣುದಾದಾ ಸ್ಮರಣೆ ಮಾಡಿದರು.
ಜಯ ಬಚ್ಚನ್ ಹೇಳಿಕೆಗೆ ಕಂಗನಾ ರಣಾವತ್ ಕಿಡಿ
ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿನ ಜಯ ಬಚ್ಚನ್ ಅವರ ಇತ್ತೀಚಿನ ಹೇಳಿಕೆಗೆ ಕಂಗನಾ ರಣಾವತ್ ಕಠಿಣ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಬಾಲಿವುಡ್ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಅವರು ಮನರಂಜನಾ ಉದ್ಯಮಕ್ಕೆ ರಕ್ಷಣೆ ಬೇಕಾಗಿದೆ. ಇಂದು ಚಿತ್ರರಂಗ ಮಾದಕ ವ್ಯಸನದಿಂದ ಕುಖ್ಯಾತಿಗೆ ಗುರಿಯಾಗಿದೆ ಮತ್ತು ಇಂದು ಇಡೀ ಉದ್ಯಮದ ಚಿತ್ರಣವನ್ನು ಕೆಲವರು ಕಳಂಕಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದರು.
ಜಯಾ ಬಚ್ಚನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ, ಜಯಾ ಜಿ ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಶ್ವೇತಾಳನ್ನು ಊಹಿಸಿಕೊಳ್ಳಿ, ಅವರು ಹದಿಹರೆಯದವರಾಗಿದ್ದು ಮಾದಕವಸ್ತುವಿನಿಂದ ಕಿರುಕುಳಕ್ಕೆ ಒಳಗಾಗಿದ್ದರೆ, ಅಥವಾ ಅಭಿಷೇಕ್ ನಿರಂತರವಾಗಿ ಬೆದರಿಸುವಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಿದ್ದರೆ ಅಥವಾ ಒಂದು ದಿನ ನೇಣು ಬಿಗಿದಿರುವುದು ಕಂಡು ಬರುತ್ತಿದ್ದರೆ ನೀವು ಇದೇ ಮಾತನ್ನು ಹೇಳುತ್ತೀರಾ? ನಮಗೂ ಸಹಾನುಭೂತಿ ತೋರಿಸಿ ಎಂದಿದ್ದಾರೆ.
ವಿದೇಶಿ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಬೇಕು : ಸಿದ್ದರಾಮಯ್ಯ
ಇನ್ನೊಂದು ದೇಶದವರ ಬಗ್ಗೆ ಬೇಹುಗಾರಿಕೆ ಮಾಡುವುದು ಖಂಡನೀಯ. ಇಂತಹ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿ ಬಂದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಿದ್ದು, ವಿದೇಶಿ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಬೇಕು. ಅವರನ್ನು ಪತ್ತೆ ಹಚ್ಚಿ ಬಲಿ ಹಾಕಬೇಕು. ಇದು ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸ. ಇಂತಹ ಕೃತ್ಯ ನಡೆಯುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕ್ಯಾಸಿನೋ ನಡೆಸುವವರು ಸರ್ಕಾರ ಉರುಳಿಸಿದ್ದು ಮುಗಿದು ಹೋದ ವಿಚಾರ : ರೇವಣ್ಣ
ಜಮೀರ್ ಅಹಮದ್ ಜತೆ ಜೆಡಿಎಸ್ ಶಾಸಕರು ಶ್ರೀಲಂಕಾಗೆ ಹೋಗಿ ಬಂದ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿ, ಕ್ಯಾಸಿನೋ ನಡೆಸುವವರು ಸರ್ಕಾರ ಉರುಳಿಸಿದ್ದು ಮುಗಿದು ಹೋದ ವಿಚಾರ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನನಗೆ ಹಾಸನ, ಹೊಳೆನರಸೀಪುರ, ಬೆಂಗಳೂರು ಯಾವುದಾದರೂ ಮೀಟಿಂಗ್ ಇದ್ದಾಗ ಹೋಗಿದ್ದೇನೆ. ಈ ಪ್ರವಾಸದ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಸಿನೋ ನಡೆಸುವವರು ಸರ್ಕಾರ ಉರುಳಿಸಿದ್ದು ಮುಗಿದು ಹೋದ ವಿಚಾರ ಎಂದರು.
24 ಗಂಟೆಯಲ್ಲಿ 83,809 ಮಂದಿಗೆ ಕೊರೊನಾ
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಒಟ್ಟಾರೆ ಸೋಂಕಿತರ ಸಂಖ್ಯೆ 49 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 83,809 ಮಂದಿಗೆ ಸೋಂಕು ಬಂದಿದ್ದು, 1,054 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ಇದರೊಂದಿಗೆ ಒಟ್ಟು ಕೊರೊನಾ ಸೋಂಕಿತ ಸಂಖ್ಯೆ 49,30,237ಕ್ಕೆ ಹೆಮ್ಮಾರಿಯಿಂದ ಸಾವನ್ನಪ್ಪಿದವರ ಸಂಖ್ಯೆ 80,776ಕ್ಕೆ ಏರಿಕೆ ಆಗಿದೆ. ಇನ್ನು ಒಟ್ಟಾರೆ 49,30,237 ಸೋಂಕಿತರ ಪೈಕಿ ದೇಶದಲ್ಲಿನ್ನೂ 9,90,061 ಸಕ್ರಿಯ ಪ್ರಕರಣಗಳಿದ್ದು, 38,59,400 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450