BJP | ಬೀದರ್ ಜಿಲ್ಲೆಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ
ಬೀದರ್ : ಬೀದರ್ ಜಿಲ್ಲೆಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಇದೀಗ ಜಗತ್ ಜಾಹೀರಾಗಿದೆ.
ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಕಾರಿನ ಮೇಲೆ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ ಬೆಂಬಲಿಗರು ದಾಳಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಈ ಘಟನೆ ನಡೆದೆ. ಅಮೃತ ಮಹೋತ್ಸವ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಪಕ್ಷ ವತಿಯಿಂದ ಕಾರ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಬಲಿಗರಿಂದ ಕೇಂದ್ರ ಸಚಿವ ಭಗವಂತ ಕಾರಿನ ಮೇಲೆ ದಾಳಿ ನಡೆಸಲಾಗಿದೆ.
ಔರಾದ್ ನಿಂದ ಪ್ರಾರಂಭವಾದ ರ್ಯಾಲಿ ಬಸವಕಲ್ಯಾಣಕ್ಕೆ ಬಂದು ತಲುಪಿತ್ತು. ಈ ವೇಳೆ ಕಾರಿನ ಮೇಲೆ ಹಲ್ಲೆ ನಡೆಸಲಾಗಿದೆ.
ಇದರೊಂದಿಗೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ಇರುವ ಅಸಮಾಧಾನ ಬಹಿರಂಗಗೊಂಡಿದೆ. clash-in-bidar-district-bjp