ಮಲ್ಲಿಕಾರ್ಜುನ್ ಅವರಿಂದ ಖರ್ಗೆ ಪಕ್ಷ ಬದಲಾವಣೆ ಸಾದ್ಯವಿಲ್ಲ – ಶಶಿ ತರೂರ್…
ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಪಕ್ಷದಲ್ಲಿ ಬದಲಾವಣೆ ತರುವುದಿಲ್ಲ, ಈಗಿರುವ ವ್ಯವಸ್ಥೆಯನ್ನು ಮುಂದುವರಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮುಖಾಮುಖಿಯಾಗಿದ್ದಾರೆ. ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಾಗಿದೆ.
ಶಶಿ ತರೂರ್ ಮಹಾರಾಷ್ಟ್ರದ ದೀಕ್ಷಾಭೂಮಿ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ನಾಗ್ಪುರದಲ್ಲಿ ಮಾತನಾಡಿದ ಅವರು, ನಾವು (ಖರ್ಗೆ-ತರೂರ್) ಶತ್ರುಗಳಲ್ಲ. ನಮ್ಮ ನಡುವೆ ನಡೆಯುತ್ತಿರುವುದು ಯುದ್ಧವೂ ಅಲ್ಲ. ಇದು ಪಕ್ಷದ ಭವಿಷ್ಯದ ಸಮೀಕ್ಷೆ ಅಷ್ಟೆ. ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಟಾಪ್-3 ನಾಯಕರಲ್ಲಿ ಒಬ್ಬರು. ಆದರೆ ಅವರಂತಹ ನಾಯಕರಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆ.
ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುತ್ತೇನೆ ಎಂದ ಅವರು, ಗಾಂಧಿ ಕುಟುಂಬದವರು ಖರ್ಗೆ ಪರ ಒಲವು ತೋರುವ ಸಾಧ್ಯತೆ ಬಗ್ಗೆ ಕೇಳಿದಾಗ, ಗಾಂಧಿ ಕುಟುಂಬದ ಮೂವರನ್ನು (ಸೋನಿಯಾ, ರಾಹುಲ್, ಪ್ರಿಯಾಂಕಾ) ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ಪಕ್ಷಕ್ಕೆ ಅಧಿಕೃತ ಅಭ್ಯರ್ಥಿ ಇಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಅವರು, ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಮಾತ್ರ ಬಯಸುವುದಾಗಿ ಹೇಳಿದರು. ಗಾಂಧಿ ಕುಟುಂಬ ತಟಸ್ಥವಾಗಿರುತ್ತದೆ ಮತ್ತು ಪಕ್ಷದ ಯಂತ್ರವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಪಕ್ಷದ ಅಧ್ಯಕ್ಷರು ನೀಡಿದ ಭರವಸೆಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.
Cong president campaign: Change in party not because of Kharge: Sisha Tharoor