ಬೆಂಗಳೂರು: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆಯಾಗಿದೆ.
ಎಐಸಿಸಿಯು ಇಂದು 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾದಂತಾಗಿದೆ. ನಾಲ್ಕು ಕ್ಷೇತ್ರಗಳು ಬಾಕಿ ಉಳಿದುಕೊಂಡಿವೆ. ಈ ಬಾರಿ ಕಾಂಗ್ರೆಸ್ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರರ ಸಹೋದರ, ಸಂಬಂಧಿಗಳಿಗೆ ಟಿಕೆಟ್ ಘೋಷಣೆ ಮಾಡಿರುವುದು ಕೂಡ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಐವರು ಸಚಿವರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಬೀದರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ, ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಗೆ ಬೆಂಗಳೂರು ದಕ್ಷಿಣ ಟಿಕೆಟ್, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಟಿಕೆಟ್ ನೀಡಲಾಗಿದೆ.
ಪ್ರಿಯಾಂಕ ಜಾರಕಿಹೊಳಿ(ಚಿಕ್ಕೋಡಿ ಕ್ಷೇತ್ರ)- ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
ಮೃಣಾಲ್ ಹೆಬ್ಬಾಳಕರ್(ಬೆಳಗಾವಿ ಕ್ಷೇತ್ರ)- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ
ಸಂಯುಕ್ತ ಪಾಟೀಲ್(ಬಾಗಲಕೋಟೆ ಕ್ಷೇತ್ರ)- ಸಚಿವ ಶಿವಾನಂದ ಪಾಟೀಲ್ ಪುತ್ರಿ
ಡಾ. ರಾಧಾಕೃಷ್ಣ ದೊಡ್ಡಮನಿ(ಕಲಬುರಗಿ ಕ್ಷೇತ್ರ)- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ
ಸಾಗರ್ ಖಂಡ್ರೆ(ಬೀದರ್ ಕ್ಷೇತ್ರ)- ಸಚಿವ ಈಶ್ವರ್ ಖಂಡ್ರೆ ಪುತ್ರ
ರಾಜಶೇಖರ್ ಹಿಟ್ನಾಳ್(ಕೊಪ್ಫಳ ಕ್ಷೇತ್ರ)- ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
ಪ್ರಭಾವತಿ ಮಲ್ಲಿಕಾರ್ಜುನ್(ದಾವಣಗೆರೆ ಕ್ಷೇತ್ರ)- ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
ಮನ್ಸೂರ್ ಖಾನ್ (ಬೆಂಗಳೂರು ಕೇಂದ್ರ ಕ್ಷೇತ್ರ)- ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ
ಸೌಮ್ಯ ರೆಡ್ಡಿ (ಬೆಂಗಳೂರು ದಕ್ಷಿಣ)- ಸಚಿವ ರಾಮಲಿಂಗಾರೆಡ್ಡಿ ಪುತ್ರಿ
ಗೀತಾ ಶಿವರಾಜ್ ಕುಮಾರ್(ಶಿವಮೊಗ್ಗ ಕ್ಷೇತ್ರ)- ಸಚಿವ ಮಧು ಬಂಗಾರಪ್ಪ ಸಹೋದರಿ
ಶ್ರೇಯಸ್ ಪಟೇಲ್( ಹಾಸನ ಕ್ಷೇತ್ರ) ಮಾಜಿ ಸಂಸದ ದಿ. ಪುಟ್ಟಸ್ವಾಮಿ ಗೌಡರ ಮೊಮ್ಮಗ
ವೆಂಕಟರಮಣೇಗೌಡ (ಮಂಡ್ಯ ಕ್ಷೇತ್ರ) ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಸಹೋದರರಿಗೆ ಟಿಕೆಟ್ ನೀಡಿದೆ.