ದೆಹಲಿ: ವಿಪಕ್ಷಗಳ ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಲೇವಡಿ ಮಾಡಿದ್ದಾರೆ.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರ ನೀಡಿದ ವೇಳೆ ಈ ರೀತಿ ಮಾತನಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬಜೆಟ್ ಅಧಿವೇಶನದ (Budget Session) ಮೊದಲ ದಿನ ಜನವರಿ 31 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನ ಉದ್ಧೇಶಿಸಿ ಮಾತನಾಡಿದ್ದರು.
ಹೀಗಾಗಿ ಬಜೆಟ್ ಅಧಿವೇಶನದ ನಾಲ್ಕನೇ ದಿನದಂದು ಕೆಳಮನೆಗೆ ಹಾಜರಾಗುವಂತೆ ಬಿಜೆಪಿ ಲೋಕಸಭೆಯಲ್ಲಿನ ತನ್ನ ಎಲ್ಲ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಲಾಗಿತ್ತು. ಇದು ಈ ಬಾರಿಯ ಲೋಕಸಭೆಯ ಕೊನೆಯ ಭಾಷಣವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸದನಕ್ಕೆ ಧನ್ಯವಾದ ಹೇಳಿದ್ದಾರೆ. ಪ್ರತಿಪಕ್ಷಗಳು ಇನ್ನೂ ಹೆಚ್ಚು ಸಮಯ ಅಲ್ಲಿಯೇ ಉಳಿಯುತ್ತಾರೆ. ಮುಂದಿನ ಚುನಾವಣೆಯ ನಂತರ ನೀವು ಪ್ರೇಕ್ಷಕರ ಗ್ಯಾಲರಿಯಲ್ಲಿರುತ್ತೀರಿ ಎಂದಿದ್ದಾರೆ.
ವಿರೋಧ ಪಕ್ಷದಲ್ಲಿರುವ ಅನೇಕರು ಚುನಾವಣೆಯಲ್ಲಿ ಹೋರಾಡುವ ಭರವಸೆ, ಶಕ್ತಿ ಕಳೆದುಕೊಂಡಿದ್ದಾರೆ. ಹಲವರು ಲೋಕಸಭೆಯ ಬದಲು ಆರೆಸ್ಸೆಸ್ ಗೆ ಹೋಗಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ನೋಡಿ ಖರ್ಗೆ ಅವರು ಸದನಕ್ಕೆ ತೆರಳಬೇಕಾಯಿತು. ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆಯಬೇಕಾಯಿತು. ನಾವು ಮೇಕ್-ಇನ್-ಇಂಡಿಯಾ ಎಂದು ಹೇಳಿದರೆ, ಕಾಂಗ್ರೆಸ್ ರದ್ದು ಮಾಡಿ ಎಂದು ಹೇಳುತ್ತದೆ. ನಾವು ವಂದೇ ಭಾರತ್ ಹೇಳುತ್ತೇವೆ, ಅವರು ಸಂಸ್ಕೃತಿ ರದ್ದುಗೊಳಿಸುತ್ತಾರೆ ಎಂದು ಹೇಳುತ್ತಾರೆ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.