ಶಾರುಖ್ ಖಾನ್ ಪುತ್ರನೆಂಬ ಕಾರಣಕ್ಕೆ ಆರ್ಯನ್ ಬಲಿಪಶು ಆಗಿದ್ದಾರೆ – ದಿಗ್ವಿಜಯ್ ಸಿಂಗ್
ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಡ್ರಗ್ಸ್ ಕೇಸ್ ನಲ್ಲಿ ಜೈಲಿನಲ್ಲಿದ್ದಾರೆ. ಸತತವಾಗಿ ಜಾಮೀನು ಅರ್ಜಿ ವಜಾ ಆಗ್ತಲೇ ಇದೆ. ಈ ನಡುವೆ ಶಾರುಖ್ ಪುತ್ರನಿಗೆ ಬೆಂಬಲಿಸುವವರಿದ್ರೆ , ಟ್ರೋಲ್ ಮಾಡುವವರೂ ಇದ್ದಾರೆ. ಆದ್ರೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದನ್ನ ನೇರವಾಗಿ ರಾಜಕೀಯಕ್ಕೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಆರ್ಯನ್ ಖಾನ್ ಶಾರುಖ್ ಖಾನ್ ಪುತ್ರನಾಗಿರುವುದಕ್ಕೆ ಅವರನ್ನ ಬಲಿಪಶು ಮಾಡಲಾಗಿದೆ ಎಂದಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಿವಣ್ಣನಿಗಾಗಿ ರಿಲೀಸ್ ಡೇಟ್ ಮುಂದೂಡಿದ ‘ಪ್ರೇಮಂ ಪೂಜ್ಯಂ’..!
ಈ ಬಗ್ಗೆ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ ಶಾರುಖ್ ಪುತ್ರ ಎಂಬ ಕಾರಣಕ್ಕೇ ಆತನನ್ನ ಬಲಿಪಶು ಮಾಡಲಾಗಿರೋದು ನಿಜಕ್ಕೂ ಬೇಸರದ ಸಂಗತಿ. ಆತನ ಅಪರಾಧವೇನು..? ಆತನ ಜೊತೆಯಲ್ಲಿದ್ದವನ ಬಳಿ 5 ಗ್ರಾಮ್ ಡ್ರಗ್ಸ್ ಸಿಕ್ಕಿದೆ. ಮುಂದ್ರಾ ಬಂದರಿನಲ್ಲಿ ಟನ್ ಗಟ್ಟಲೇ ವಶಕ್ಕೆ ಪಡೆದ ಹೆರಾಯಿನ್ ಕಥೆ ಏನಾಯಿತು..? ಕುಲದೀಪ್ ಸಿಂಗ್ ಯಾರು? ಎನ್ಸಿಬಿ ಮತ್ತು ಎನ್ಐಎ ಈ ಕೇಸ್ ಬಗ್ಗೆ ವಿಚಾರಣೆ ನಡೆಸುತ್ತಿದ್ಯಾ ಅಂತ ನಮಗೆ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿವೋರ್ಸ್ ನಂತರ ಆದ್ಯಾತ್ಮಕತೆ ಕಡೆಗೆ ಸಮಂತಾ – ರಿಷಿಕೇಷ ಭೇಟಿ ನಂತರ ಚಾರ್ ಧಾಮ್ ಯಾತ್ರೆಯಲ್ಲಿ ಭಾಗಿ..!
ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಬಿಜೆಪಿ ನ್ಯಾಯಾಲಯದ ಆದೇಶ ಕಾಯದೆ ಕಾಂಗ್ರೆಸ್ ಮುಖಂಡರೇ ತೀರ್ಪು ನೀಡಿದ್ದಾರೆ. ಅಂತಿಮವಾಗಿ ದಿಗ್ವಿಜಯ್ ಸಿಂಗ್ ಆರ್ಯನ್ ಖಾನ್ ರಕ್ಷಣೆಗೆ ಬಂದಿದ್ದಾರೆ. ತನಿಖಾ ತಂಡ ವಾಸ್ತವ ಅಂಶ ಪರಿಶೀಲಿಸುತ್ತಿರುವಾಗ ದಿಗ್ವಿಜಯ್ ಸಿಂಗ್ ತೀರ್ಪು ನೀಡಿದ್ದಾರೆ. ಇಂತಹ ರಾಜಕಾರಣ ಮಾಡುವ ಮೂಲಕ ಎಷ್ಟು ದಿನಗಳವರೆಗೆ ಜನರನ್ನು ನೀವು ಹಾದಿ ತಪ್ಪಿಸುತ್ತೀರಾ ಎಂದು ಪ್ರಶ್ನಿಸಿದೆ. ಮುಂಬೈಯ ಕರಾವಳಿಯಲ್ಲಿ ಕ್ರೂಸ್ ಶಿಪ್ ಮೇಲೆ ಅಕ್ಟೋಬರ್ 3 ರಂದು ಎನ್ಸಿಬಿ ದಾಳಿಯ ನಂತರ ಆರ್ಯನ್ ಖಾನ್ನನ್ನು ಬಂಧಿಸಲಾಗಿದೆ. ಈವರೆಗೂ ಆರ್ಯನ್ ಜೈಲಿನಲ್ಲಿಯೇ ಇದ್ದಾರೆ.