ತಮಿಳುನಾಡಿನ ಸಿಎಂ ಅಣತಿಯಂತೆ ನಡೆದುಕೊಳ್ತಾರೆ : ರಾಹುಲ್ ಗಾಂಧಿ..!
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ಸಮೀಪದಲ್ಲಿದೆ. ಕಾಂಗ್ರೆಸ್ ದ್ರಾವಿಡರ ನಾಡಲ್ಲಿ ಭರ್ಜರಿ ಪ್ರಚಾರ ಕಾರರ್ಯದಲ್ಲಿ ತೊಡಗಿದೆ. ಮತ್ತೊಂದೆಡೆ AICC ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ತಮಿಳುನಾಡಿನಾದ್ಯಂತ ಪ್ರವಾಸ ಮಾಡುತ್ತಾ ಭರ್ಜರಿ ಪ್ರಚಾರ ನಡೆಸುವ ಜೊತೆಗೆ ತಾವು ಹೋದ ಕಡೆಗಳಲೆಲ್ಲಾ ಬಿಜಿಪಿ, ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನ ಮಾಡುತ್ತಾ , ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಬಿಜೆಪಿ ಸರ್ಕಾರದ ಜೊತೆಗೆ ತಮಿಳಿನಾಡಿನ ಸಿಎಂ ವಿರುದ್ಧ ಕಿಡಿಕಾರಿದ್ದಾರೆ ‘ರಾಗಾ’.
ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಗ್ಯಾರಂಟಿ ಇಲ್ಲ… ಇರಲಿ ಜಾಗ್ರತೆ..!
ಹೌದು ತೂತುಕುಡಿಯಲ್ಲಿ ನಡೆದರ್ಯಾಲಿಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ತಮಿಳುನಾಡಿನ ಸಿಎಂ ಪಳನಿಸ್ವಾಮಿ ಹಾಗೂ RSS ವಿರುದ್ಧ ಕಿಡಿಕಾರಿದ್ದಾರೆ. ಪಳನಿಸ್ವಾಮಿ ರಾಜ್ಯವನ್ನು ಪ್ರತಿನಿಧಿಸುವುದಿಲ್ಲ. ಅವರು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಂದ್ಹಾಗೆ ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣಾ ಕಾವು ರಂಗೇರುತ್ತಿದೆ. ಈ ನಡುವೆ ಪಳನಿಸ್ವಾಮಿ, RSS ಕೇಂದ್ರದ ವಿರುದ್ಧ ರೋಡ್ ಶೋ ನಲ್ಲಿ ಗುಡುಗಿರುವ ರಾಹುಲ್ ಗಾಂಧಿ ತಮಿಳು ಸಂಸ್ಕೃತಿಯನ್ನು ಅವಮಾನಿಸಲು ಪಳನಿಸ್ವಾಮಿ ಅವರು RSS ಗೆ ಅವಕಾಶ ನೀಡಬಾರದು. ಒಂದು ದೇಶ, ಒಂದು ಸಂಸ್ಕೃತಿ, ಒಂದೇ ಇತಿಹಾಸ ಎಂದು ಮೋದಿ ಹೇಳ್ತಾರೆ. ಆದ್ರೆ ತಮಿಳು ಭಾಷೆ ಕೂಡ ಭಾರತದ್ದೇ ಭಾಷೆಯಲ್ಲವೇ. ತಮಿಳರ ಇತಿಹಾಸ ಬಾರತಕ್ಕೆ ಸೇರಿಲ್ವಾ, ಒಬ್ಬ ಭಾರತೀಯನಾಗಿ ತಮಿಳು ಸಂಸ್ಕೃತಿ ರಕ್ಷಣೆ ನನ್ನ ಕರ್ತವ್ಯ ಎಂದಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ. ಅಲ್ದೇ ಕೇಂದ್ರ ಸರ್ಕಾರ ಹೇಳಿದ್ದನ್ನೆಲ್ಲಾ ಕೇಳುವ ಸಿಎಂ ಇಲ್ಲಿದ್ದಾರೆ. ಇವರು ರಾಜ್ಯವನ್ನ ಪ್ರತಿನಿಧಿಸುವುದಿಲ್ಲ. ಮೋದಿ ಎದುರು ಕೈಕಟ್ಟಿ ನಿಲ್ಲುವ ವ್ಯಕ್ತಿ ತಮಿಳುನಾಡನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.