ತಮಿಳುನಾಡು ಅಸೆಂಬ್ಲಿ ಎಲೆಕ್ಷನ್ಗೆ ರಾಹುಲ್ ಗಿಮಿಕ್ಕಾ..?
ಚೆನ್ನೈ: ಪಕ್ಷ ಸಂಘಟನೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತಮಿಳುನಾಡಿನ ಹಳ್ಳಿಯೊಂದರ ಕಾಡಿನ ನಡುವೆ ಭೋಜನ ಸೇವಿಸಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ತಮಿಳಿನ ವಿಲೇಜ್ ಕುಕಿಂಗ್ ಚಾನೆಲ್ನ ಶೋದಲ್ಲಿ ಭಾಗವಹಿಸಿ, ತಾವೂ ಅಡುಗೆ ಮಾಡಿ, ಮಶ್ರೂಮ್ ಬಿರಿಯಾನಿಯನ್ನು ಸವಿದ ವಿಡಿಯೋ ಸಖತ್ ವೈರಲ್ ಆಗಿದೆ. ತಮಿಳುನಾಡಿನ ಹಳ್ಳಿಯೊಂದರ ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಅಣಬೆ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಕಾರು ಇಳಿದು ಸ್ವಲ್ಪ ದೂರ ಕಾಡಿನ ನಡೆದುಕೊಂಡ ಹೋದ ರಾಹುಲ್ ಗಾಂಧಿ, ಅಣಬೆ ಬಿರಿಯಾನಿ ತಯಾರಿಸುವ ದೇಸಿ ಬಾಣಸಿಗರ ಜತೆ ಸಮಾಲೋಚನೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಹೋಗುವುದರೊಳಗಾಗಿ ಅಣಬೆ ಬಿರಿಯಾನಿ ರೆಡಿಯಾಗಿತ್ತು. ಬಾಣಸಿಗರು ರೈತ ತಯಾರಿಗೆ ಈರುಳ್ಳಿ, ಟೊಮೆಟೋ ಕಟ್ ಮಾಡುತ್ತಾ ಸಿದ್ಧತೆ ಮಾಡಿಕೊಂಡಿದ್ದರು. ಯಾವುದೇ ಬಿಗುಮಾನ ಇಲ್ಲದೆ ಅಡುಗೆ ತಯಾರಿಸುವ ಸ್ಥಳಕ್ಕೆ ಹೋಗಿ ದೇಸಿ ಅಡುಗೆಗಳ ಬಗ್ಗೆ ರಾಹುಲ್ ಮಾಹಿತಿ ಪಡೆದುಕೊಂಡರು. ರೈತ ತಯಾರಿಗೆ ಹೆಚ್ಚಿದ್ದ ಈರುಳ್ಳಿ, ಟೊಮೆಟೋ, ಮೊಸರು ಮಿಕ್ಸ್ ಮಾಡಿದ ರಾಹುಲ್ಗಾಂಧಿ ತಾವೇ ಟೇಸ್ಟ್ ನೋಡುತ್ತಾರೆ.
ನಂತರ ನೆಲದ ಮೇಲೆ ಹಾಸಿದ ಚಾಪೆ ಮೇಲೆ ಕುಳಿತ ರಾಹುಲ್ ಗಾಂಧಿ, ಕೆಲಕಾಲ ಹಳ್ಳಿ ಅಡುಗೆ ತಯಾರಕರ ಜತೆ ಉಭಯ ಕುಶಲೋಪರಿ ನಡೆಸಿದ್ದಾರೆ. ಬಳಿಕ ವಿಶಾಲವಾದ ಬಾಳೆ ಎಲೆಯ ಮೇಲೆ ಬಡಿಸಿದ ಅಣಬೆ ಬಿರಿಯಾನಿ ಸವಿದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಜತೆ ತೆರಳಿದ್ದ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ, ದೇಸಿ ಅಡುಗೆಗಳು, ಹಾಗೂ ನಾಟಿ ಬಾಣಸಿಗರ ನಡುವಿನ ಸಂಭಾಷಣೆಯನ್ನು ರಾಹುಲ್ ಗಾಂಧಿಗೆ ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದ್ದಾರೆ.
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳರ ನಾಡಿನಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಈ ಕಾರಣಕ್ಕೆ ರಾಹುಲ್ ಗಾಂಧಿ, ಅಡುಗೆ ಚಾನೆಲ್ ನೆಪದಲ್ಲಿ ಹಳ್ಳಿಗೆ ಹೋಗಿ ಅಣಬೆ ಬಿರಿಯಾನಿ ಸವಿಯುವ ಮೂಲಕ ತಮಿಳು ಭಾಷಿಗರನ್ನು ಕಾಂಗ್ರೆಸ್ನತ್ತ ಸೆಳೆಯುವ ತಂತ್ರವಾ ಎಂಬ ಮಾತುಗಳು ಕೇಳಿ ಬರುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel