ಬೆಂಗಳೂರಿನ ಸುಮನಹಳ್ಳಿ ಚಿತಾಗಾರ ಬಳಿ ಮುಂದುವರೆದ ಆಂಬುಲೆನ್ಸ್ ಕ್ಯೂ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣಕೇಕೆ ಮುಂದುವರೆದಿದ್ದು, ನಗರದ ಸುಮನಹಳ್ಳಿ ಚಿತಾಗಾರ ಮುಂದೆ ಆಂಬುಲೆನ್ಸ್ ಗಳ ಕ್ಯೂ ಮುಂದುವರೆದಿದೆ.
ನಿನ್ನೆ ನಗರದಲ್ಲಿ 137 ಮಂದಿ ಮೃತಪಟ್ಟಿದ್ದು, ಇಂದು ಬೆಳಗಿನಿಂದಲೇ ಆಂಬುಲೆನ್ಸ್ ಗಳು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಶವಗಳನ್ನು ಹೊತ್ತು ನಿಂತಿದ್ದವು.
ಅಂದಹಾಗೆ ನಿನ್ನೆ ಒಂದೇ ದಿನಗದಲ್ಲಿ 25 ಮಂದಿ ಕೊವಿಡ್ ಮೃತದೇಹಗಳ ದಹನ ಮಾಡಲಾಗಿದೆ.
ಹೆಚ್ಚಿನ ಕ್ಯೂ ಹಿನ್ನೆಲೆ ಬೆಳಗ್ಗೆ ಎಂಟು ಗಂಟೆಯಿಂದಲೇ ದಹನ ಕಾರ್ಯ ಆರಂಭವಾಗಿದೆ.
ಚಿತಾಗಾರದ ಮುಂದೆ ಮೃತರ ಕುಟುಂಬಸ್ಥರು ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕಾಗಿ ಬೀಡು ಬಿಟ್ಟಿದ್ದಾರೆ.
ಈಗಿನ ವರದಿ ಪ್ರಕಾರ 12 ಗಂಟೆಯವರೆಗೆ 6 ಮೃತದೇಹಗಳನ್ನ ದಹನ ಮಾಡಿದ್ದಾರೆ ಎನ್ನಲಾಗಿದೆ.