ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

Namratha Rao by Namratha Rao
November 6, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಪನೀರ್ ಫ್ರೈಡ್ ರೈಸ್

ಬೇಕಾಗುವ ಪದಾರ್ಥಗಳು
ಬಾಸ್ಮತಿ ಅನ್ನ – 2 ಕಪ್
ಪನೀರ್ ಚೂರುಗಳು ‌- 1ಕಪ್
2 ಚಮಚ ಟೊಮೆಟೊ ಕೆಚಪ್,
2 ಚಮಚ ಸೋಯಾ ಸಾಸ್,
2 ಚಮಚ ಚಿಲ್ಲಿ ಸಾಸ್,
2 ಚಮಚ ಕಾರ್ನ್ ಪೌಡರ್,
1 ಚಮಚ ಮೆಣಸಿನ ಪುಡಿ,
ರುಚಿಗೆ ತಕ್ಕಷ್ಟು ಉಪ್ಪು
ತರಕಾರಿಗಳು (ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಹೂಕೋಸು, ಕ್ಯಾಪ್ಸಿಕಂ)
Saakshatv cooking recipe Paneer fried rice

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಮಾಡುವ ವಿಧಾನ

ಒಂದು ಬೌಲ್ ನಲ್ಲಿ 1ಚಮಚ ಟೊಮೆಟೊ ಕೆಚಪ್, 1ಚಮಚ ಸೋಯಾ ಸಾಸ್, 1ಚಮಚ ಚಿಲ್ಲಿ ಸಾಸ್, 1ಚಮಚ ಕಾರ್ನ್ ಪೌಡರ್, 1/2 ಚಮಚ ಮೆಣಸಿನ ಪುಡಿ, ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ಮಿಶ್ರಣವನ್ನು ತಯಾರಿಸಿ. ನಂತರ ಅದಕ್ಕೆ ಪನೀರ್ ಚೂರುಗಳನ್ನು ಸೇರಿಸಿ ಮತ್ತು 10 ನಿಮಿಷ ಮ್ಯಾರಿನೇಟ್ ಮಾಡಿ.
ನಂತರ ತವಾ ಬಿಸಿ ಮಾಡಿ ಎಣ್ಣೆಯನ್ನು ಸೇರಿಸಿ, ಪನೀರ್ ಚೂರುಗಳನ್ನು ಫ್ರೈ ಮಾಡಿ, ಅದನ್ನು ಪಕ್ಕಕ್ಕೆ ಇರಿಸಿ.
ಬಳಿಕ ಒಂದು ಕಡಾಯಿ ತೆಗೆದುಕೊಂಡು, ಎಣ್ಣೆಯನ್ನು ಬಿಸಿ ಮಾಡಿ, ಕತ್ತರಿಸಿದ ತರಕಾರಿಗಳನ್ನು ಸೇರಿಸಿ (ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಹೂಕೋಸು, ಕ್ಯಾಪ್ಸಿಕಂ) ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ.

Saakshatv cooking recipe Paneer fried rice
ನಂತರ ಅದಕ್ಕೆ 1ಚಮಚ ಸೋಯಾ ಸಾಸ್, 1 ಚಮಚ ಚಿಲ್ಲಿ ಸಾಸ್, 1 ಚಮಚ ಟೊಮೆಟೊ ಕೆಚಪ್, 1/2 ಚಮಚ ಮೆಣಸು ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಬಳಿಕ ಬಾಸ್ಮತಿ ಅನ್ನವನ್ನು ಸೇರಿಸಿ. ಅದನ್ನು ನಿಧಾನವಾಗಿ ಬೆರೆಸಿ. ಅಂತಿಮವಾಗಿ ಹುರಿದ ಪನೀರ್ ಮತ್ತು ಹುರಿದ ಈರುಳ್ಳಿ ಸೇರಿಸಿ. ಯಾವುದೇ ಗ್ರೇವಿ ಅಥವಾ ಕೆಚಪ್ ನೊಂದಿಗೆ ಸವಿಯಿರಿ..

ಸಿಂಪಲ್ , ಟೇಸ್ಟಿ ಅಡುಗೆ ರೆಸಿಪಿಗಳು

ಇನ್’ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ

ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ/ಸಾಗು/ಸಾಬುದಾನ – 1 ಕಪ್
ಮೊಸರು – 1 ಕಪ್
ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು

Saakshatv cooking recipe sabbakki idli

ಮಾಡುವ ವಿಧಾನ
ಸಬ್ಬಕ್ಕಿ/ಸಾಗು/ಸಾಬುದಾನವನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಮೂರು ಗಂಟೆ ಕಾಲ ಹಾಗೆಯೇ ಬಿಡಿ. ಇಡ್ಲಿ ರವೆ/ಅಕ್ಕಿ ರವೆಯನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಅರ್ಧ ಗಂಟೆ ಹಾಗೆಯೇ ಬಿಡಿ..
Saakshatv cooking recipe sabbakki idli

ನಂತರ ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ನೆನೆಸಿದ ಸಬ್ಬಕ್ಕಿ,  ರವೆಯನ್ನು ಸೇರಿಸಿ, ಮೊಸರನ್ನು ಹಾಕಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣಕ್ಕೆ ಉಪ್ಪು ಹಾಕಿ, ಅಗತ್ಯವಿದ್ದರೆ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ಕಳೆದ ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಿ. ತುಂಬಾ ರುಚಿಕರವಾದ ಆರೋಗ್ಯಕರ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.

ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್)

ಬೇಕಾಗುವ ಸಾಮಗ್ರಿಗಳು
ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣಿನ ಹೋಳುಗಳು – 1 ಕಪ್
ಹಾಲು – 1 ಕಪ್
ಮಿಲ್ಕ್ ಮೇಡ್ – 1/2 ಕಪ್
ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ ಸ್ವಲ್ಪ
Saakshatv cooking recipe musk melon juice

ಮಾಡುವ ವಿಧಾನ
ಮೊದಲಿಗೆ ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣಿನ ಹೋಳುಗಳನ್ನು ಹಾಲು, ಮಿಲ್ಕ್ ಮೇಡ್ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ . ನಂತರ ಅದಕ್ಕೆ ‌ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ‌ಸೇರಿಸಿ.
ಐಸ್ ಪೀಸ್ ಗಳನ್ನು ಹಾಕಿ ರುಚಿರುಚಿಯಾದ ತಣ್ಣಗಿರುವ ಮಸ್ಕ್ ಮೆಲನ್ ಜ್ಯೂಸ್ ಅನ್ನು ಸವಿಯಿರಿ.

ಈರುಳ್ಳಿ ಉತ್ತಪ್ಪಂ

ಬೇಕಾಗುವ ಪದಾರ್ಥಗಳು

1 ಕಪ್ ಉದ್ದಿನ ಬೇಳೆ
3 ಕಪ್ ಅಕ್ಕಿ
1 ಟೀಸ್ಪೂನ್ ಮೆಂತ್ಯ
1 ಟೀಸ್ಪೂನ್ ಕಡ್ಲೆಬೇಳೆ
ರುಚಿಗೆ ತಕ್ಕಷ್ಟು ಉಪ್ಪು
ನುಣ್ಣಗೆ ಕತ್ತರಿಸಿದ ಕೊತ್ತಂಬರಿ, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೊಪ್ಪು
Saakshatv cooking recipe poha uttappa

ಮಾಡುವ ವಿಧಾನ

ಕಡ್ಲೆಬೇಳೆ, ಅಕ್ಕಿ ಮತ್ತು ಮೆಂತೆಯನ್ನು 3 ರಿಂದ 4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ಉದ್ದಿನ ಬೇಳೆಯನ್ನು ಕೂಡ 3 ರಿಂದ 4 ಗಂಟೆ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
ಉದ್ದಿನ ಬೇಳೆಯಿಂದ ನೀರನ್ನು ಸೋಸಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾಗಿ ಅರೆಯಿರಿ. ನೆನೆಸಿದ ಕಡ್ಲೆಬೇಳೆ, ಅಕ್ಕಿ ಮತ್ತು ಮೆಂತೆಯ ನೀರನ್ನು ಸೋಸಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸ್ವಲ್ಪ ಒರಟಾಗಿ ಅರೆಯಿರಿ.
Saakshatv cooking recipe onion uttappam

ಉದ್ದಿನ ಬೇಳೆ ಹಿಟ್ಟನ್ನು ಅಕ್ಕಿ ಹಿಟ್ಟಿನ ಮಿಶ್ರಣದ ಜೊತೆ ಸೇರಿಸಿ, ಚೆನ್ನಾಗಿ ಕಲಸಿ. ಇದನ್ನು 8-10 ಗಂಟೆಗಳ ಕಾಲ ಮುಚ್ಚಿ, ರಾತ್ರಿಯಿಡೀ ಹುದುಗಿಸಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ಸ್ವಲ್ಪ ದಪ್ಪವಾಗಿ ವೃತ್ತಾಕಾರವಾಗಿ ಹರಡಿ. ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಈರುಳ್ಳಿ, ಮೆಣಸಿನಕಾಯಿ ಮತ್ತು ಕರಿಬೇವು ಸೊಪ್ಪನ್ನು ಸಿಂಪಡಿಸಿ. ಅದರ ಸುತ್ತಲೂ ಒಂದು ಚಮಚ ಎಣ್ಣೆಯನ್ನು ಸುರಿಯಿರಿ. 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಮುಚ್ಚಳವನ್ನು ಮುಚ್ಚಿ ಬೇಯಿಸಿ. ಇನ್ನೊಂದು ಬದಿಯನ್ನು ತಿರುಗಿಸಿ ಬೇಯಿಸಿ.
ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿ ಈರುಳ್ಳಿ ಉತ್ತಪಂ ಅನ್ನು ಸವಿಯಿರಿ.

ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು

ತಣ್ಣಗಿನ ಹಾಲು – 1/4 ಲೀಟರ್
ಕೋಕಾ ಪೌಡರ್ – 2 ಚಮಚ
ಸಕ್ಕರೆ – 2-3 ಚಮಚ
ವೆನಿಲ್ಲಾ ಐಸ್ ಕ್ರೀಂ – 1 ಸ್ಕೂಪ್
ಚಾಕಲೇಟ್ ಸಿರಪ್ – 2 ಚಮಚ
ವಿಪ್ಡ್ ಕ್ರೀಮ್/ಐಸ್ ಕ್ರೀಮ್/ಚಾಕಲೇಟ್ ತುರಿ – 1 ಚಮಚ(ಬೇಕಿದ್ದರೆ)
ಐಸ್ ಕ್ಯೂಬ್ – 8

ಮಾಡುವ ವಿಧಾನ

ಮೊದಲು ಹಾಲು, ಕೋಕಾ ಪೌಡರ್, ಸಕ್ಕರೆ, ವೆನಿಲ್ಲಾ ಐಸ್ ಕ್ರೀಂ, 6 ಐಸ್ ಕ್ಯೂಬ್ಸ್ ಗಳನ್ನು ಬ್ಲೆಂಡರ್ ಗೆ ಹಾಕಿ ಬ್ಲೆಂಡ್ ಮಾಡಿ.
ನಂತರ ಚಾಕಲೇಟ್ ಸಿರಪ್ ನಿಂದ ಗ್ಲಾಸನ್ನು ಅಲಂಕರಿಸಿ ಅದಕ್ಕೆ ಬ್ಲೆಂಡ್ ಮಾಡಿದ ಚಾಕಲೇಟ್ ಮಿಲ್ಕ್ ಶೇಕ್ ಅನ್ನು ಸೇರಿಸಿ. ನಂತರ ವಿಪ್ಡ್ ಕ್ರೀಮ್ ಮತ್ತು ಐಸ್ ಕ್ಯೂಬ್ ಅನ್ನು ಮೇಲಿಂದ ಹಾಕಿ ಸರ್ವ್ ಮಾಡಿ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಮಾವಿನಕಾಯಿ ‌ಪಚ್ಚಿಡಿ

ಬೇಕಾಗುವ ಸಾಮಗ್ರಿಗಳು

ಮಾವಿನಕಾಯಿ ‌- 1
ಸಾಸಿವೆ – 11/2 ಚಮಚ
ಉದ್ದಿನ ಬೇಳೆ – 1/2 ಚಮಚ
ಇಂಗು – ಚಿಟಿಕೆ
ಮೆಂತೆ – 1 ಚಮಚ
ಮೆಣಸಿನ ಪುಡಿ – 1ಚಮಚ
ಅರಿಶಿನ ಪುಡಿ -1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
ಬೆಲ್ಲ – 1 ಸಣ್ಣ ತುಂಡು
Saakshatv cooking recipe mango pachhudi

ಮಾಡುವ ವಿಧಾನ

ಮೊದಲಿಗೆ ಬಾಣಲೆ ಬಿಸಿ ಮಾಡಿ ಸಾಸಿವೆ 1 ಚಮಚ, ಮೆಂತೆ 1 ಚಮಚ ಹಾಕಿ ‌ಹುರಿದು ಹುಡಿ ಮಾಡಿಕೊಳ್ಳಿ.
ನಂತರ ಮಾವಿನ ಕಾಯಿಯನ್ನು ಚಿಕ್ಕ ತುಂಡುಗಳಾಗಿ ‌ಕತ್ತರಿಸಿ ಇಟ್ಟು ಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಉದ್ದಿನ ಬೇಳೆ, ಇಂಗಿನ ಒಗ್ಗರಣೆ ಕೊಡಿ. ನಂತರ ಅದಕ್ಕೆ ಕತ್ತರಿಸಿದ ಮಾವಿನಕಾಯಿ ‌ತುಂಡುಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
Saakshatv cooking recipe mango pachhudi
ಮಾವಿನಕಾಯಿ ಬಾಡಿಸಿದ ನಂತರ ಮೆಣಸಿನ ಪುಡಿ, ಅರಿಶಿನ ‌ಪುಡಿ‌, ಉಪ್ಪು ಹಾಕಿ‌ ಚೆನ್ನಾಗಿ ಕಲಸಿ. ಈಗ ಸ್ವಲ್ಪ ‌ನೀರು ಸೇರಿಸಿ ಬೇಯಲು ಬಿಡಿ. ಬೆಂದ ಮೇಲೆ ಬೆಲ್ಲ ಹಾಕಿ ಕಲಸಿ. ಬೆಲ್ಲ ಕರಗುವವರೆಗೂ ಬೇಯಿಸಿ ಕೆಳಗಿಳಿಸಿ.
ಈಗ ಮಾವಿನಕಾಯಿ ಪಚ್ಚಿಡಿ ಸವಿಯಲು ‌ಸಿದ್ಧವಾಗಿದೆ.

ನೀರು ದೋಸೆ

ಬೇಕಾಗುವ ಸಾಮಗ್ರಿಗಳು

2 ಕಪ್ ದೋಸೆ ಅಕ್ಕಿ
1 ಕಪ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
ನೀರು
Saakshatv cooking recipe neeru dosa

ಮಾಡುವ ವಿಧಾನ

1. ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು 2 ರಿಂದ 3 ಗಂಟೆಗಳ ಕಾಲ ನೆನೆಸಿ.

2. ನಂತರ ಮಿಕ್ಸಿ ಜಾರಿನಲ್ಲಿ ಅಕ್ಕಿ, ತೆಂಗಿನಕಾಯಿ ತುರಿ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಾಕಷ್ಟು ನೀರನ್ನು ಸೇರಿಸಿ ನಯವಾಗಿ ಅರೆಯಿರಿ.

3. ಬಳಿಕ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ, ಅದು ಹಾಲಿನಂತೆ ತೆಳ್ಳಗಾಗುವಷ್ಟು ನೀರು ಸೇರಿಸಿ.

Saakshatv cooking recipe neeru dosa

4. ದೋಸೆ ಕಾವಲಿಯನ್ನು ಬಿಸಿ ಮಾಡಿ, ಎಣ್ಣೆ ಹಚ್ಚಿ, ಅದರ ಮೇಲೆ ಹಿಟ್ಟನ್ನು ಚೆಲ್ಲಿದಂತೆ ಹರಡಿ. ಒಂದು ಬದಿಯನ್ನು ಬೇಯಿಸಿ ಎರಡು ‌ಪದರ ಮಾಡಿ ತೆಗೆಯಿರಿ.

ಬಿಸಿ ಬಿಸಿಯಾದ ನೀರು ದೋಸೆಯನ್ನು ಚಟ್ನಿ ಅಥವಾ ರಸಾಯನದೊಂದಿಗೆ ಸವಿಯಿರಿ.

Tags: #saakshatvcookingfood recipies
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram