ಉತ್ತರ ಪ್ರದೇಶ – ಗ್ರಾಮಸ್ಥರಿಂದ ಕೊರೋನಾ ಮಾತಾ ದೇವಿಯ ಪೂಜೆ
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಶುಕ್ಲಾಪುರ ಗ್ರಾಮವು ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ತತ್ತರಿಸಿತ್ತು. ಕೊರೋನಾ ಸೋಂಕಿನಿಂದ ಹೆಚ್ಚಿನ ಸಂಖ್ಯೆಯ ಸಾವು ನೋವುಗಳು ಸಂಭವಿಸಿತು. ಪ್ರಸ್ತುತ ಕೋವಿಡ್ -19 ಪ್ರಕರಣಗಳು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿಲ್ಲವಾದರೂ, ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಆದರೆ ಶುಕ್ಲಾಪುರದ ಗ್ರಾಮಸ್ಥರು ಕೋವಿಡ್ ವೈರಸ್ ನಿಂದ ಕಾಪಾಡುವಂತೆ ಕೊರೋನಾ ಮಾತಾ ದೇವತೆಯನ್ನು ಪ್ರಾರ್ಥಿಸಲು ಆರಂಭಿಸಿದ್ದಾರೆ. ಕೊರೋನಾ ಮಾತೆಯ ಆಶೀರ್ವಾದದಿಂದ ಗ್ರಾಮಕ್ಕೆ ಸ್ವಲ್ಪ ಸಮಾಧಾನ ಸಿಗುತ್ತದೆ ಎಂದು ಆಶಿಸಿದ್ದಾರೆ
ಪ್ರತಾಪಗಢದಲ್ಲಿ ತಾತ್ಕಾಲಿಕ ದೇವಾಲಯವನ್ನು ನಿರ್ಮಿಸಿದ್ದು, ಭಕ್ತರು ಆ ದೇಗುಲದ ಮುಂದೆ ಇರಿಸಲಾಗಿರುವ ‘ಕೊರೋನಾ ಮಾತಾ’ ದೇವಿಯ ಪ್ರತಿಮೆಯ ದರ್ಶನ ಪಡೆಯುತ್ತಿರುವುದನ್ನು ಸುದ್ದಿ ಮಾಧ್ಯಮಗಳು ಪೋಸ್ಟ್ ಮಾಡಿದ ಫೋಟೋಗಳು ತೋರಿಸಿದೆ.
‘ಕೊರೋನಾ ಮಾತಾ’ ವಿಗ್ರಹವನ್ನು ಪೂಜಿಸಲು ಶುಕ್ಲಾಪುರ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿನ ಜನರು ಬರುತ್ತಿದ್ದು, ಗ್ರಾಮಸ್ಥರು ಕೋವಿಡ್ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಿಕೊಂಡು ಎಚ್ಚರಿಕೆ ವಹಿಸುವಂತೆ ಗಮನಹರಿಸಿದ್ದಾರೆ. ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಗ್ರಾಮಸ್ಥರು ಜನರಿಗೆ ನೆನಪಿಸುತ್ತಾರೆ.
ವಿಗ್ರಹವನ್ನು ಸ್ಥಾಪಿಸಿರುವ ದೇವಾಲಯದ ಗೋಡೆಯ ಮೇಲೆ ಒಂದು ಸೂಚನೆಯನ್ನು ನೀಡಲಾಗಿದ್ದು, ‘ಮಾಸ್ಕ್ ಬಳಸಿ, ಕೈ ತೊಳೆಯಿರಿ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಿ ಎಂದು ಬರೆಯಲಾಗಿದೆ. ಹಳದಿ ಬಣ್ಣದ ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳನ್ನು ಮಾತ್ರ ಅರ್ಪಿಸಲು ಅನುಮತಿಸಲಾಗಿದೆ.
ಕಳೆದ ಒಂದೂವರೆ ವರ್ಷಗಳಿಂದ ಭಾರತ ಮತ್ತು ಜಗತ್ತನ್ನು ಬಾಧಿಸುತ್ತಿರುವ ಕೊರೋನವೈರಸ್ ಸಾಂಕ್ರಾಮಿಕ ತಡೆಗಟ್ಟಲು ಹಳ್ಳಿಯ ಭಕ್ತರು ಈಗ ತಮ್ಮ ನಂಬಿಕೆಯ ಹೊಸ ದೇವತೆ ಕೊರೋನಾ ಮಾತೆಯನ್ನು ಪ್ರಾರ್ಥಿಸುತ್ತಿದ್ದಾರೆ. ದೈವಿಕ ಹಸ್ತಕ್ಷೇಪವು ನಮ್ಮನ್ನು ಮಾರಕ ವೈರಸ್ನಿಂದ ರಕ್ಷಿಸುತ್ತದೆ ಎಂಬ ಭರವಸೆಯನ್ನು ಅವರು ಇಟ್ಟುಕೊಂಡಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಸಮಯದಲ್ಲಿ ಅಮೃತ ಬಳ್ಳಿ ಕಷಾಯದ ಆರೋಗ್ಯ ಪ್ರಯೋಜನಗಳು#Saakshatv #healthtips #Giloy https://t.co/z4DsWOV94S
— Saaksha TV (@SaakshaTv) June 11, 2021
ಸೋಯಾ ಚಂಕ್ಸ್ ಮಂಚೂರಿ#soyaChuck #Manchurian https://t.co/Hhd2pyUlPt
— Saaksha TV (@SaakshaTv) June 11, 2021
ಇಂದಿನ ಸಮಯದಲ್ಲಿ ಮನೆಯಲ್ಲಿರಬೇಕಾದ 5 ವೈದ್ಯಕೀಯ ಸಾಧನಗಳು#medicaldevices https://t.co/t31elkxMq4
— Saaksha TV (@SaakshaTv) June 11, 2021
ರೈಲ್ವೆ ಪ್ರಯಾಣಿಕರ ಗಮನಕ್ಕೆ – ರೈಲ್ವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಳೆ ನಿಯಮ ಬದಲಾವಣೆ ಸಾಧ್ಯತೆ#Trainpassenger https://t.co/8l8UsNRUJ7
— Saaksha TV (@SaakshaTv) June 11, 2021
#CoronaMata #temple