ಕೊಲೆ ಆರೋಪಿಯೊಬ್ಬಾತನಿಗೆ ಮಗಳಿಗೆ ವರ ಹುಡುಕುವುದಕ್ಕಾಗಿ ಕೋರ್ಟ್ 45 ದಿನಗಳ ಮಧ್ಯಂತರ ಜಾಮೀನು(Interim Bail) ನೀಡಿದೆ ಎನ್ನಲಾಗಿದೆ.
ಆರೋಪಿಯು ತನ್ನ 20 ವರ್ಷದ ಮಗಳ ಮದುವೆಗೆ ವರ ಹುಡುಕಬೇಕು ಎಂದು ಜಾಮೀನು ಕೋರಿದ್ದ. ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರ ಪೀಠವು ಇದಕ್ಕಾಗಿ 45 ದಿನಗಳ ಜಾಮೀನು ಮಂಜೂರು ಮಾಡಿದೆ. ಕೊಲೆ, ಗಲಭೆ, ನೋವುಂಟುಮಾಡುವುದು, ಕಿಡಿಗೇಡಿತನ, ಅತಿಕ್ರಮಣ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗಾಗಿ ಈ ವ್ಯಕ್ತಿಯನ್ನು ದೆಹಲಿ ಹೈಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು.
ಈತ ಸದ್ಯ ಹೈಕೋರ್ಟ್ ನೀಡಿರುವ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹಾಗೂ ಜಾಮೀನು ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಸದ್ಯ ಈ ವಿಚಾರಣೆ ಬಾಕಿ ಇದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವ್ಯಕ್ತಿಯ ಪತ್ನಿ ಇಬ್ಬರು ಸಂಭಾವ್ಯ ವರಗಳನ್ನು ನೋಡಿದ್ದು, ಅವರಲ್ಲಿ ಒಬ್ಬರೊಂದಿಗೆ ತನ್ನ ಮಗಳ ಮದುವೆ ಗೊತ್ತುಪಡಿಸಬೇಕಿದೆ ಎಂದು ಕೈದಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.