ಕೊರೊನಾ ಲಸಿಕೆ ಪಡೆದ ಬಳಿಕ ಮೃತಪಟ್ಟ ಸ್ವಯಂಸೇವಕಿ : ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ
ಆಂದ್ರಪ್ರದೇಶ: ದೇಶಾದ್ಯಂತ ಕೊರೊನಾ ಲಸಿಕೆ ವೇಗವಾಗಿ ಸಾಗುತ್ತಿದೆ. ಕೆಲವೆಡೆ ಇದರ ಸೈಡ್ ಎಫೆಕ್ಸ್ ಗಳು ಕಂಡುಬಂದಿದ್ದು, ಜನರ ಆತಂಕಕ್ಕೆ ಕಾರಣವಾಗ್ತಿದ್ದು, ಲಸಸಿಕೆ ಪಡೆಯಲು ಅನೇಕರು ಹಿಂದೇಟು ಹಾಕ್ತಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಕರೊನಾ ಲಸಿಕೆ ತೆಗೆದುಕೊಂಡ ಬಳಿಕ ಸ್ವಯಂಸೇವಕಿಯೊಬ್ಬರು ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
‘ಮಿಸ್ ಇಂಡಿಯಾ’ 2020ರ ಕಿರೀಟ ಮುಡಿಗೇರಿಸಿಕೊಂಡ ತೆಲಂಗಾಣ ಸುಂದರಿ..!
28 ವರ್ಷದ ಲಲಿತಾ ಮೃತ ಸ್ವಯಂ ಸೇವಕಿಯಾಗಿದ್ದಾರೆ. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಮಂಡಲದ ನಿವಾಸಿಯಾಗಿದ್ದು, ಓರ್ವ ಮಗ ಇದ್ದಾನೆ. ಈಕೆ ಇತರೇ 8 ಮಂದಿಯೊಂದಿಗೆ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಅಷ್ಟೂ ಮಂದಿಗೂ ತಲೆ ನೋವು ಮತ್ತು ಜ್ವರದಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಆದರೆ, ಲಲಿತಾರ ಪರಿಸ್ಥತಿ ಮಾತ್ರ ತುಂಬಾ ಗಂಭೀರವಾಗಿತ್ತು. ಇದಾದ ಬಳಿಕ ಮಾತ್ರೆಯನ್ನು ತೆಗೆದುಕೊಂಡಿದ್ದ ಆಕೆ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ, ಸ್ವಲ್ಪ ಸಮಯದ ಬಳಿಕ ಲಲಿತಾ ಮೃತಪಟ್ಟಿರೋದಾಗಿ ತಿಳಿದುಬಂದಿದೆ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಕೆಯ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆಂದು ದಾಖಲಿಸಿದ್ದಾರೆ. ಇದೀಗ ಸಿಎಂ ಜಗನ್ ನೇತೃತ್ವದ ಸರ್ಕಾರ ಲಲಿತಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿದೆ.
ಸೂಪರ್ ಜೆಟ್ ವೇಗದಲ್ಲಿ ತೈಲ ಬೆಲೆ ಏರಿಕೆ : ರಾಜ್ಯದಲ್ಲಿ ಬೆಂಗಳೂರಲ್ಲಿ ಎಷ್ಟು ಗೊತ್ತಾ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel