ಆನೇಕಲ್: ಕೇಂದ್ರ ಸಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೆಸರಿನಲ್ಲಿ ಕೋಟಿ ಕೋಟಿ ವಂಚಿಸಿರುವ ಘಠನೆಯೊಂದು ನಡೆದಿದೆ.
ನಕಲಿ ಟ್ರಸ್ಟ್ ಮೂಲಕ ಪವಿತ್ರಾ ಹಾಗೂ ಆಕೆಯ ತಂಡ ವಂಚಿಸಿದೆ ಎನ್ನಲಾಗಿದೆ. ಆರೋಪಿ ಪವಿತ್ರಾ ತಮಿಳುನಾಡಿನ ಮೂಲದವಳು. ಸದ್ಯ ಈ ಮಹಿಳೆಯ ವಿರುದ್ಧ ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣಗಳು ಬಯಲಾಗಿವೆ.
ನಾವು ಟ್ರಸ್ಟ್ ಆರಂಭಿಸಿದ್ದೇವೆ. ಈ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ 17 ಸಾವಿರ ಕೋಟಿ ರೂ. ಹಣ ಹಂದಿದೆ. ನಿರ್ಮಲಾ ಸೀತಾರಾಮನ್ ಅವರು ಹಣ ವರ್ಗಾಯಿಸಿದ್ದಾರೆ. ಲೋನ್ ಮೂಲಕ ಹಣ ನಿಮಗೆ ನೀಡುತ್ತೇವೆ. 10 ಲಕ್ಷ ರೂ. ಲೋನ್ ಮಾಡಿದರೆ, 5 ಲಕ್ಷ ರೂ. ಕಟ್ಟಬೇಕು.
ಸಬ್ಸಿಡಿಯಲ್ಲಿ ನಿಮಗೆ ಹಣ ನೀಡಲಾಗುತ್ತಿದೆ. ಆದರೆ, ಮುಂಚಿತವಾಗಿ ಹಣ ಕಟ್ಟಬೇಕು ಎಂದು ಹಣ ಪಡೆದುಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.
ಹೀಗೆ ನೂರಾರು ಜನ ಮಹಿಳೆಯರಿಂದ 2019 ರಿಂದ ನಿರಂತರವಾಗಿ ಹಣ ವಸೂಲಿ ಮಾಡಲಾಗಿದೆ. ಮಹಿಳೆಯರಿಂದ 5 ಸಾವಿರ ರೂ. ನಿಂದ 25 ಸಾವಿರ ರೂ. ವರೆಗೆ ಹಣ ಕಟ್ಟಿಕೊಳ್ಳಲಾಗಿದೆ. ಆನಂತರ ಲೋನ್ ನೀಡದೆ ವಂಚಿಸಲಾಗಿದೆ ಎನ್ನಲಾಗಿದೆ. ಇತ್ತ ಮೋಸ ಹೋದ ಮಹಿಳೆಯರು ದೂರು ನೀಡುತ್ತಿದ್ದಾರೆ.