ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ – ನೀವು ದಾಳ ಆಗಬೇಡಿ – ಸಿ.ಟಿ. ರವಿ
ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ ನಡೆಯುತ್ತಿದೆ. ನಿಮ್ಮ ಬೇಡಿಕೆ ನಮಗೆ ಗೊತ್ತಿದೆ. ನೀವು ದಾಳ ಆಗಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರು ಹೇಳಿಕೆ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರದ ಕುರಿತಾಗಿ ಸಿಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಸ್ತುತ ಉಪಚುನಾವಣೆಯ ಹಿನ್ನೆಲೆ ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಡಿಸಿಎಂ ಲಕ್ಷ್ಮಣ ಸವದಿಯವರು ಮೇ 2ರ ನಂತರ ಬೇಡಿಕೆ ಈಡೇರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದಿದ್ಧಾರೆ. ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ ನಡೆಯುತ್ತಿದೆ. ನಿಮ್ಮ ಬೇಡಿಕೆ ನಮಗೆ ಗೊತ್ತಿದೆ. ನೀವು ದಾಳ ಆಗಬೇಡಿ ಎಂದು ಪ್ರತಿಭಟನೆಯಲ್ಲಿ ಪ್ರತಿಪಕ್ಷದ ರಾಜಕೀಯ ಹಸ್ತಕ್ಷೇಪವಿರೋದಾಗಿ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಇದೇ ವೇಳೆ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನದ ಕುರಿತಾಗಿ ಮಾತನಾಡಿರುವ ಸಿಟಿ ರವಿ ಅವರು ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ ಅನ್ನುವುದು ಗೊತ್ತಾಗುತ್ತಿದೆ. ನಮ್ಮ ಪರಿಶ್ರಮ ಹಾಗೂ ಹೋರಾಟಕ್ಕೆ ಫಲ ಸಿಗಲಿದೆ. ನಮಗೆ ಜನರ ಮೇಲೆ ಹಾಗೂ ಇವಿಎಂ ಎರಡರ ಮೇಲೂ ವಿಶ್ವಾಸವಿದೆ. ಕೆಲವರ ಹಾಗೆ ಇವಿಎಂ ಮೇಲೆ ಆರೋಪ ಮಾಡುವುದಿಲ್ಲ ಎಂದರು.
ಯುವಜನತೆ, ಮಧ್ಯ ವಯಸ್ಕರಲ್ಲಿ ಹೆಚ್ಚಿದ ಸಾವು : ಸಚಿವ ಡಾ.ಸುಧಾಕರ್ ಆತಂಕ