ಸಿಎಂ ಬಿಎಸ್ ವೈ ಕುರಿತಾಗಿ ಸಿ ಟಿ ರವಿ ಹೀಗೆ ಹೀಳಿದ್ದೇಕೆ..?
ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು. ಆದರೆ ಮಾಲೀಕರಲ್ಲ. ಅಲ್ಲದೆ ಉತ್ತರಾಧಿಕಾರಿ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿರುವ ಸಿ ಟಿ ರವಿ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ಸಿಟಿ ರವಿ ಯಾಕೆ ಹೀಗೆ ಹೇಳಿದ್ರು. ಯಾರನ್ನ ಟಾರ್ಗೆಟ್ ಮಾಡಿ ಹೇಳಿದ್ರೂ ಅನ್ನೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ಅವರು ಯಡಿಯೂರಪ್ಪ ಅವರ ಕುರಿತಾಗಿ ಮಾತನಾಡಿದ್ದರು. ಆದ್ರೆ ಅವರ ಇಶಾರೆ ಬಿ ವೈ ವಿಜಯೇಂದ್ರ ಅವರು ಹಾಗೂ ಕುಟುಂಬ ರಾಜಕಾರಣವನ್ನ ಬಿಂಬಿಸುವಂತಿದೆ ಎಂಬ ಗುಸುಗುಸು ಶರುವಾಗಿದೆ.
ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಮುಂದಿನ ಉತ್ತರಾಧಿಕಾರಿ ಎಂಬಂತೆ ಬಿಂಬಿಸುತ್ತಿರುವುದರ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದೇ ಹಲವರು ಮಾತನಾಡಿಕೊಳ್ತಿದ್ದಾರೆ.
ಅಲ್ಲದೇ ಇದೇ ವಿಚಾರವಾಗಿ ಮಾತನಾಡಿದ್ದ ಸಿ.ಟಿ. ರವಿ, ಕಾರ್ಯಕರ್ತರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಸಿಗುತ್ತದೆ. ಇದಕ್ಕೆ ಉದಾಹರಣೆ ತಾವೇ ಎಂದ ಅವರು, ಒಂದು ಕಾಲದಲ್ಲಿ ಕರಪತ್ರ ಹಂಚುತ್ತಿದ್ದ ನಾನು ಈಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ ಎಂದಿದ್ದಾರೆ.
ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ – ನೀವು ದಾಳ ಆಗಬೇಡಿ – ಸಿ.ಟಿ. ರವಿ
ಯುವಜನತೆ, ಮಧ್ಯ ವಯಸ್ಕರಲ್ಲಿ ಹೆಚ್ಚಿದ ಸಾವು : ಸಚಿವ ಡಾ.ಸುಧಾಕರ್ ಆತಂಕ