ADVERTISEMENT
Saturday, July 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

“ಒಬ್ಬ ಹಿರಿಯ ನಟನಿಗೆ ಹೀಗೇನಾ ಮರ್ಯಾದೆ ಕೊಡೋದು”…?

admin by admin
February 22, 2021
in Cinema, Newsbeat, ಮನರಂಜನೆ
darshan jaggesh
Share on FacebookShare on TwitterShare on WhatsappShare on Telegram

‘ಒಬ್ಬ ಹಿರಿಯ ನಟನಿಗೆ ಹೀಗೇನಾ ಮರ್ಯಾದೆ ಕೊಡೋದು…?

ಬೆಂಗಳೂರು : ‘ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ..’ ಇದು 40ಕ್ಕೂ ಹೆಚ್ಚು ವರ್ಷ ಕಲಾಸೇವೆ ಮಾಡುತ್ತಾ ಬಂದಿರುವ ನವರಸನಾಯಕ ಜಗ್ಗೇಶ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತರಾಟೆ ತೆಗೆದುಕೊಂಡ ಪರಿ. ಇದಷ್ಟೆ ಅಲ್ಲಾ, ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ರಾಬರ್ಟ್ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರಿಗೆ ಮಾತನಾಡಲು ಅವಕಾಶ ಕೊಡದೆ ಎಗರಾಡಿದ್ದಾರೆ.

Related posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

July 12, 2025
ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

July 12, 2025

ಏನಿದು ಘಟನೆ..?

ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ ಅನ್ನೋ ಆಡಿಯೋ ಕ್ಲಿಪ್ ವಿವಾದ ಫೆಬ್ರವರಿಯ ಚಳಿ, ಬೆಲೆ ಏರಿಕೆ ಮಧ್ಯೆಯೂ ಭಾರಿ ಸದ್ದು ಮಾಡುತ್ತಿದೆ. ಈ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಮರ ಸಾರಿದ್ದಾರೆ. ಸಿಕ್ಕ ಸಿಕ್ಕ ಕಡೆಯೆಲ್ಲಾ ನವರಸನಾಯಕನ ವಿರುದ್ಧ ಕೆಂಡಕಾರುತ್ತಿದ್ದಾರೆ. ಇಂದು ಇದು ಮತ್ತೊಂದು ಹಂತಕ್ಕೆ ಹೋಗಿದ್ದು, ತೋತಾಪುರಿ ಚಿತ್ರೀಕರಣಕ್ಕೆಂದು ಸದ್ಯ ಮೈಸೂರಿನಲ್ಲಿರುವ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

darshan jaggesh

ಮೇಕಪ್ ಹಾಕಿ ಶೂಟ್ ಗೆ ರೆಡಿಯಾಗಿ ಕುಳಿತಿದ್ದ ಜಗ್ಗೇಶ್ ಅವರಿಗೆ ದಾಸನ ಅಭಿಮಾನಿಗಳು ಬಿಗ್ ಶಾಕ್ ನೀಡಿದ್ದು, ಏಕಾಏಕಿ ಸೆಟ್ ಗೆ ನುಗ್ಗಿ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ನೀವು ಕ್ಷಮೆ ಕೇಳಲೇಬೇಕು.. ದರ್ಶನ್ ಅಭಿಮಾನಿಗಳ ಬಗ್ಗೆ ಯಾಕೆ ಹೀಗೆಲ್ಲಾ ಮಾತನಾಡಿದ್ದೀರಿ. ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ.. ಅಂತಾ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದ್ದಾರೆ.

ಈ ವೇಳೆ ನೆಲದ ಮೇಲೆ ಕುಳಿತಿದ್ದ ಜಗ್ಗೇಶ್, ಒಬ್ಬ ಹಿರಿಯನಿಗೆ ಹೀಗೆನಾ ಮರ್ಯಾದೆ ಕೊಡೊದು… ದರ್ಶನ್ ಜೊತೆ ಚೆನ್ನಾಗೇ ಇದ್ದೀನಿ, ಇಬ್ಬರು ಮಾತನಾಡುತ್ತಿದೀವಿ. ಇದು ಮೂರನೇ ವ್ಯಕ್ತಿಯ ಕಿತಾಪತಿ. ನಾನು ಆ ರೀತಿ ಮಾತನಾಡಿಲ್ಲ. ಈ ಬಗ್ಗೆ ನಾನು ಅಂದೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಂತ ಅಭಿಮಾನಿಗಳಿ ಮನವರಿಕೆ ಮಾಡಿಕೊಡಲು ಮುಂದಾದ್ರು. ಆದ್ರೆ ಜಗ್ಗೇಶ್ ಅವರ ಮಾತನ್ನ ಕೇಳುವ ಪ್ರಯತ್ನವನ್ನೇ ಮಾಡದ ಡಿ ಬಾಸ್ ಅಭಿಮಾನಿಗಳು ಪದೇ ಪದೇ ಜಗ್ಗೇಶ್ ಅವರಿಗೆ ಚುಚ್ಚುವಂತೆ ಮಾತನಾಡಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಜಗ್ಗಣ್ಣನನ ಮಾತನಾಡಲು ಅವಕಾಶ ಕೊಡದೇ ಎಗರಾಡಿದ್ರು. ಈ ಗ್ಯಾಪ್ ನಲ್ಲಿ ಜಗ್ಗೇಶ್ ಅವರು ದರ್ಶನ್ ಅವರಿಗೆ ಕರೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಲೇ ಇಲ್ಲ.ಕೊನೆಗೆ ಜಗ್ಗೇಶ್ ಅವರು ಕ್ಷಮೆ ಕೇಳಿ ಅಭಿಮಾನಿಗಳನ್ನು ಶಾಂತಗೊಳಿಸಿದ್ರು. ಬಳಿಕ ಡಿ ಬಾಸ್ ಅಭಿಮಾನಿಗಳು ಅಲ್ಲಿಂದ ಹೊರಟು ಹೋದ್ರು.

ಇದೇನಾ ಹಿರಿಯ ನಟನಿಗೆ ಕೊಡೋ ಗೌರವ..?
ಸದ್ಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರವರ ದೃಷ್ಠಿಕೋನದಲ್ಲಿ ಎಡಿಟ್ ಮಾಡಿಕೊಂಡು ಮೆರೆದಾಡುತ್ತಿದ್ದಾರೆ. ಆದ್ರೆ ಇಂದಿನ ಘಟನೆ ನಿಜಕ್ಕೂ ದುರದೃಷ್ಠಕರ. ಯಾಕೆಂದ್ರೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 40ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದು, ಗಾಡ್ ಫಾದರ್ ಇಲ್ಲದೇ ಕೇವಲ ಪ್ರತಿಭೆಯಿಂದ ಬೆಳೆದು, ಕನ್ನಡಿಗರ ಬಾಯಲ್ಲಿ ನವರಸನಾಯಕ ಎಂದು ಕರೆಸಿಕೊಂಡು ಕನ್ನಡಿಗರ ಮನೆಮನದಲ್ಲಿ ಸ್ಥಾನ ಪಡೆದು, ಇನ್ನೂ ಕಲಾಸೇವೆ ಮಾಡುತ್ತಿರುವ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ನಿಂದಿಸುವ ಮುನ್ನ ಒಂದು ಕ್ಷಣ ಯೋಚನೆ ಮಾಡಬೇಕಿತ್ತು.

Tags: DarshanJaggeshSandalwood
ShareTweetSendShare
Join us on:

Related Posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

by Shwetha
July 12, 2025
0

KRCL Technicians Recruitment 2025 : ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಟೆಕ್ನಿಷಿಯನ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ....

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

by Shwetha
July 12, 2025
0

ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ಸರ್ಕಾರದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ರೈತರ ಪಹಣಿ (RTC) ನೋಂದಣಿ ಪ್ರಕ್ರಿಯೆಯು ಅವರ ವಾರಸುದಾರರ ಹೆಸರಿಗೆ ಸುಲಭವಾಗಿ ಮತ್ತು ನೇರವಾಗಿ...

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

by Shwetha
July 12, 2025
0

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಚರ್ಚೆಗಳ ನಡುವೆ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹೈಕಮಾಂಡ್‌ ಅನ್ನು ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು...

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
July 12, 2025
0

ರಾಜ್ಯದ ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಾವು ಸಂಪೂರ್ಣವಾಗಿ ನಿಷ್ಠಾವಂತರಾಗಿರುವುದನ್ನು ಪುನರುಚ್ಚರಿಸಿದ್ದಾರೆ. ಪಕ್ಷವಿದ್ದರೆ ತಾನೇ ನಾನು. ಪಕ್ಷವೇ ಇಲ್ಲದಿದ್ದರೆ ನಾನಿಲ್ಲ...

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

by Shwetha
July 12, 2025
0

ರಾಜ್ಯದಲ್ಲಿ 135 ಸೀಟುಗಳ ಭರ್ಜರಿ ಗೆಲುವು ಒದಗಿಸಿದರೂ ಕೂಡ ಸುಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನಸಭೆ ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram