ಬೀದರ್: ಪ್ರಾಣಿಗಳ ಅಂಗಾಂಗ ಮರಳಿ ನೀಡುವಂತೆ ಸರ್ಕಾರದಿಂದ ಡೆಡ್ ಲೈನ್ ನೀಡಲಾಗಿದೆ.
ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ (Wild Animals) ಅಂಗಾಂಗಗಳನ್ನು ಇಟ್ಟು ಕೊಂಡಿರುವ ವ್ಯಕ್ತಿಗಳು ಮರಳಿ ಅಂಗಾಂಗ ಹಿಂದಿರುಗಿಸಲು ಈ ತಿಂಗಳ ಕೊನೆಯ ಡೆಡ್ ಲೈನ್ ನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ನೀಡಿದ್ದಾರೆ.
ಏಪ್ರಿಲ್ 10ರ ಒಳಗೆ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಲಾಗಿದೆ.
ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಜನರಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಸರ್ಕಾರ ಏಪ್ರಿಲ್ 10 ರಂದು ಕೊನೆಯ ಬಾರಿ ವಾಪಸ್ ಮಾಡುವಂತೆ ಅವಕಾಶ ನೀಡಿದೆ. ಹೀಗಾಗಿ ಜನರು ತಮ್ಮ ಹತ್ತಿರ ಇರುವ ವನ್ಯ ಜೀವಿಯ ಅಂಗಾಂಗಳನ್ನು ಮರಳಿ ಅರಣ್ಯ ಕಚೇರಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.