ಮಂಡ್ಯ ಉಸ್ತುವಾರಿಗಾಗಿ ನಾರಾಯಣಗೌಡ ಡಿಮ್ಯಾಂಡ್
ಮಂಡ್ಯ : ಮಂಡ್ಯ ಉಸ್ತುವಾರಿ ಬೇಕು ಅಂತ ಡಿಮ್ಯಾಂಡ್ ಮಾಡಿದ್ದೇನೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಯಾಗಿದ್ದು, ಖಾತೆ ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ.
ಇದರ ಜೊತೆಗೆ ಜಿಲ್ಲಾ ಉಸ್ತುವಾರಿಗಳ ನೇಮಕವೂ ನಡೆಯಬೇಕಿದ್ದು, ಸಚಿವರು ಲಾಬಿ ಆರಂಭಿಸಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಮಂಡ್ಯದ ಮದ್ದೂರಿನಲ್ಲಿ ಸಚಿವ ನಾರಾಯಣಗೌಡ ಮಾತನಾಡಿ, ಯಾವುದೇ ಖಾತೆ ಕೊಟ್ಟರು ಪರವಾಗಿ ಅದನ್ನ ನಿಭಾಯಿಸುವೆ.
ಮಂಡ್ಯ ಉಸ್ತುವಾರಿ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದೆ ಅಷ್ಟೇ. ಕಾರಣಾಂತರದಿಂದ ಯಡ್ಡಿಯೂರಪ್ಪ ರಾಜಿನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ವೇಳೆ 17 ಜನ ವಲಸಿಗರಿಗೆ ಸಚಿವ ಸ್ಥಾನ ನೀಡದ ವಿಚಾರವಾಗಿ ಮಾತನಾಡಿ, ಉಳಿದವರಿಗೂ ಕೂಡ ಸಚಿವ ಸ್ಥಾನ ಸಿಗಲಿದ್ದು, ಒಳ್ಳೆದಾಗಲಿದೆ ಎಂದರು.