ಪಾಟ್ನಾ: ರೈಲು ಹಳಿ ತಪ್ಪಿದ ಪರಿಣಾಮ ನಾಲ್ವರು ಸಾವನ್ನಪ್ಪಿ, ಕನಿಷ್ಠ 80 ಜನ ಗಾಯಗೊಂಡಿರುವ ಘಟನೆ ಬಿಹಾರದ ಬಾಸ್ಕರಳ್ಳಿ ಎಂಬಲ್ಲಿ ನಡೆದಿದೆ.
ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ನಿಂದ ಅಸ್ಸಾಂನ ಕಾಮಾಖ್ಯಕ್ಕೆ ತೆರಳುತ್ತಿದ್ದ ಈಶಾನ್ಯ ಎಕ್ಸ್ಪ್ರೆಸ್ ರೈಲು ಬಾಸ್ಕರನ ರಘುನಾಥಪುರ (Raghunathpur station) ಹತ್ತಿರ ಹಳಿ ತಪ್ಪಿದೆ.ಈ ಘಟನೆ ನಿನ್ನೆ ರಾತ್ರಿ ಸುಮಾರು 10 ಗಂಟೆಯ ವೇಳೆಯ ನಡೆದಿದೆ. ಹಳಿ ತಪ್ಪಿದ ಪರಿಣಾಮ 6ಕ್ಕೂ ಅಧಿಕ ಭೋಗಿಗಳು ಉರುಳಿ ಬಿದ್ದಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೇ, ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಡಿಸಿಎಂ ತೇಜಸ್ವಿ ಯಾದವ್ (Tejashwi Yadav) ಆಸ್ಪತ್ರೆಗೆಳು ಅಲರ್ಟ್ ಆಗಿರುವಂತೆ ಹೇಳಿದ್ದಾರೆ. ಅಲ್ಲದೇ, ಹೆಲ್ಪ್ ಲೈನ್ ಕೂಡ ನೀಡಲಾಗಿದೆ.