ADVERTISEMENT
Thursday, December 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಐಪಿಎಲ್‍ನತ್ತ ಚಿತ್ತವನ್ನಿಟ್ಟಿರುವ ದೇಸಿ ಸಿಕ್ಸರ್ ಹೀರೋ ಆಕಾಶ್ ಚೌಧರಿ

admin by admin
November 11, 2025
in Sports, ಕ್ರಿಕೆಟ್
Meghalaya's Akash Kumar Choudhary

Meghalaya's Akash Kumar Choudhary

Share on FacebookShare on TwitterShare on WhatsappShare on Telegram

Related posts

ಒತ್ತಡ.. ನಿರೀಕ್ಷೆಗಳ ಭಾರ ನಿಭಾಯಿಸುವುದು ಹೇಗೆ..? ಸಚಿನ್ ಹೇಳುವುದೇನು..?

ಒತ್ತಡ.. ನಿರೀಕ್ಷೆಗಳ ಭಾರ ನಿಭಾಯಿಸುವುದು ಹೇಗೆ..? ಸಚಿನ್ ಹೇಳುವುದೇನು..?

December 10, 2025
ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

December 10, 2025

ಆಕಾಶ್ ಕುಮಾರ್ ಚೌಧರಿ.. ಈ ಋತುವಿನ ದೇಸಿ ಕ್ರಿಕೆಟ್‍ನ ಹೀರೋ. ಮೇಘಾಲಯದ ವೇಗಿ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದಾನೆ. ಒಂದೇ ಓವರ್‍ನಲ್ಲಿ ಸತತ ಸಿಕ್ಸರ್ ಸಿಡಿಸಿದ್ದ ದಾಖಲೆ ಸದ್ಯ ಭಾರತದಲ್ಲಿ ರವಿಶಾಸ್ತ್ರಿ ಹೆಸರಿನಲ್ಲಿದೆ. ಇದೀಗ ಆಕಾಶ್ ಕುಮಾರ್ ಚೌಧರಿ ಸತತ ಆರು ಸಿಕ್ಸರ್ ಸಿಡಿಸಿದ್ದಲ್ಲದೇ, ಸತತ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್ ಸಿಡಿಸಿದ್ದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ.
ಕಳೆದ ಭಾನುವಾರ ಅರುಣಾಚಲ ಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಆಕಾಶ್ ಕುಮಾರ್ 11 ಎಸೆತಗಳಲ್ಲಿ 50 ರನ್ ದಾಖಲಿಸಿ ದೇಸಿ ಕ್ರಿಕೆಟ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾನೆ. ಈ ಹಿಂದೆ ದೇಸಿ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಮತ್ತು ಭಾರತದ ಪರ ರವಿಶಾಸ್ತ್ರಿ ದೇಸಿ ಕ್ರಿಕೆಟ್‍ನಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್‍ಗಳನ್ನು ಸಿಡಿಸಿದ್ದರು.
ಇದೀಗ ಆಕಾಶ್ ಕುಮಾರ್ ಚೌಧರಿ ಐಪಿಎಲ್‍ನತ್ತ ಚಿತ್ತವನ್ನಿಟ್ಟಿದ್ದಾನೆ. ಐಪಿಎಲ್‍ನ ಯಾವುದಾದ್ರೂ ಒಂದು ಫ್ರಾಂಚೈಸಿಯಲ್ಲಿ ಆಡುವ ಅವಕಾಶ ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದಾನೆ ಆಕಾಶ್ ಕುಮಾರ್
ಐಪಿಎಲ್‍ನಲ್ಲಿ ಆಡಿದ್ರೆ ನಿಮ್ಮ ಹೆಸರು ದಾಖಲಾಗುತ್ತದೆ. ಐಪಿಎಲ್‍ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಅದೇ ರೀತಿ ನನಗೂ ಐಪಿಎಲ್‍ನಲ್ಲಿ ಆಡಬೇಕು ಎಂಬ ಆಸೆ ಇದೆ ಎಂದು ಆಕಾಶ್ ಕುಮಾರ್ ಹೇಳಿಕೊಂಡಿದ್ದಾನೆ.
ಈಗಾಗಲೇ ನಾರ್ತ್‍ಈಸ್ಟ್‍ನಿಂದ ರಿಯಾನ್ ಪರಾಗ್ ಮಾತ್ರ ಐಪಿಎಲ್‍ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾನೆ. ಅಲ್ಲದೆ ಭಾರತ ತಂಡದಲ್ಲಿ ಅವಕಾಶ ಪಡೆದ ಮೊದಲ ನಾರ್ತ್ ಆಟಗಾರ. ಈಗಾಗಲೇ ರಿಯಾನ್ ಪರಾಗ್ 9 ಟಿ-20 ಪಂದ್ಯಗಳಲ್ಲಿ ಭಾರತದ ಪರ ಆಡಿದ್ದಾನೆ.
ನಾನು ದಾಖಲೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಿಹಾರ ವಿರುದ್ಧದ ಪಂದ್ಯದಲ್ಲೂ ನಾನು ನಾಲ್ಕು ಸಿಕ್ಸರ್‍ಗಳ ಸಹಾಯದಿಂದ 60 ರನ್ ಗಳಿಸಿದ್ದೇನೆ. ಅಂದ ಹಾಗೇ ನೆಟ್ಸ್‍ನಲ್ಲಿ ನಾನು ಬೀಸು ಹೊಡೆತಗಳ ಬಗ್ಗೆ ಗಮನ ಹರಿಸುತ್ತಿದ್ದೆ. ನಮ್ಮ ತಂಡ ಈಗ ಉತ್ತಮ ಸ್ಥಿತಿಯಲ್ಲಿದೆ. ನಾನು ಆಟದ ಕಡೆ ಹೆಚ್ಚಿನ ಗಮನಹರಿಸುತ್ತಿದ್ದೇನೆ. ಅದರಲ್ಲೂ ಬೀಸು ಹೊಡೆತದ ಕಡೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಕ್ರಿಕೆಟಿಗನಿಗೂ ಒತ್ತಡಗಳು ಇರುವುದು ಸಹಜ. ನನ್ನ ಗುರಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವುದು. ತಂಡದ ಗೆಲುವಿಗೆ ಸಹಕರಿಸುವುದು ಎಂದು ಆಕಾಶ್ ಚೌಧರಿ ಹೇಳಿಕೊಂಡಿದ್ದಾನೆ.
ಒಟ್ಟಿನಲ್ಲಿ ಆಕಾಶ್ ಕುಮಾರ್ ಚೌಧರಿ ಮುಂದಿನ ಐಪಿಎಲ್‍ನಲ್ಲಿ ಫ್ರಾಂಚೈಸಿಗಳು ಕಣ್ಣೀಟ್ಟಿರುವುದಂತೂ ಸುಳ್ಳಲ್ಲ. ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಆಲೌರೌಂಡರ್ ಆಗಿ ತಂಡಕ್ಕೆ ಆಧಾರವಾಗಬಹುದು. ಒಂದು ವೇಳೆ ಆಕಾಶ್ ಕುಮಾರ್ ಇದೇ ರೀತಿಯ ಪ್ರದರ್ಶನ ಮುಂದುವರಿದ್ರೆ, ಹಾರ್ದಿಕ್ ಪಾಂಡ್ಯನಿಗೆ ರಿಪ್ಲೇಸ್ ಆಗೋ ಅವಕಾಶವೂ ಇದೆ. ಯಾವೂದಕ್ಕೂ ಕಾದು ನೋಡೋಣ.

Source: Desi sixer hero Akash Chaudhary has his sights set on IPL
Via: Desi sixer hero Akash Chaudhary has his sights set on IPL
Tags: #Akash Kumar Choudhary#cricket latest#cricket newsCricketIPLipl2025Meghalayaranajiteam india
ShareTweetSendShare
Join us on:

Related Posts

ಒತ್ತಡ.. ನಿರೀಕ್ಷೆಗಳ ಭಾರ ನಿಭಾಯಿಸುವುದು ಹೇಗೆ..? ಸಚಿನ್ ಹೇಳುವುದೇನು..?

ಒತ್ತಡ.. ನಿರೀಕ್ಷೆಗಳ ಭಾರ ನಿಭಾಯಿಸುವುದು ಹೇಗೆ..? ಸಚಿನ್ ಹೇಳುವುದೇನು..?

by admin
December 10, 2025
0

ಪ್ರತಿಭೆ..ಸಾಮರ್ಥ್ಯ..ನಂಬಿಕೆ.. ನಿರೀಕ್ಷೆ..ಭರವಸೆ..ಒತ್ತಡ..ಸಾಧನೆ..ಯಶಸ್ಸು..ಇದನ್ನೆಲ್ಲಾ ಬ್ಯಾಲೆನ್ಸ್ ಮಾಡಿಕೊಂಡು ಮುನ್ನಡೆದಾಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಪ್ರತಿಯೊಬ್ಬರಲ್ಲೂ ಒಂದಲ್ಲ ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಹಾಗಂತ ಪ್ರತಿಭೆ ಇದ್ರೆ ಮಾತ್ರ ಸಾಲಲ್ಲ....

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಹಾರ್ದಿಕ್ ಆಲ್‌ರೌಂಡ್ ಆಟದ ಕರಾಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಧೂಳೀಪಟ, ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

by Shwetha
December 10, 2025
0

ಕಟಕ್: ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ರುದ್ರತಾಂಡವವಾಡಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಮತೋಲಿತ ಪ್ರದರ್ಶನದೊಂದಿಗೆ ಭಾರತ ನೀಡಿದ ಬೃಹತ್...

Suryakumar yadav

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

by admin
December 9, 2025
0

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ...! ಸದ್ಯ ಟೀಮ್ ಇಂಡಿಯಾದ ಟಿ-20 ತಂಡವನ್ನು ಆಯ್ಕೆ ಮಾಡೋದೇ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು. ಕೊನೆಗೆ ಏನೇನೋ ಸರ್ಕಸ್...

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

by admin
December 8, 2025
0

ಡಿಯರ್ ವೆಂಕಿ... ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. ರಾಜ್ಯ ಹಾಗೂ ಟೀಮ್ ಇಂಡಿಯಾ ಆಟಗಾರನಾಗಿ ನೀವು ಹಲವು...

ಟೀಮ್ ಇಂಡಿಯಾದ ಪರಿಸ್ಥಿತಿ ತೀರಾ “ಗಂಭೀರ”..!

by admin
December 8, 2025
0

ಗೌತಮ್ ಗಂಭೀರ್.. ಬಹುಶಃ ಆತ ಬಿಜೆಪಿಯ ಮಾಜಿ ಸಂಸದನಾಗದೇ ಇರುತ್ತಿದ್ರೆ ಆತನ ವಿರುದ್ಧ ಟೀಕೆಗಳು ಬರುತ್ತಿರಲಿಲ್ಲವೇನೋ..!? ಹಾಗೇ ರೋಹಿತ್ - ವಿರಾಟ್ ಜೊತೆ ಉತ್ತಮ ಒಡನಾಡವಿರುತ್ತಿದ್ರೆ ಆತನನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram