ಚೆನ್ನೈನಲ್ಲಿ ಧೋನಿಯ ಐಪಿಎಲ್ ವಿದಾಯ ಪಂದ್ಯ ….!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ವಿದಾಯ ಹೇಳುವ ಸುಳಿವನ್ನು ನೀಡಿದ್ದಾರೆ. ಧೋನಿಯರ ನಿವೃತ್ತಿಯ ಬಗ್ಗೆ ಅಭಿಮಾನಿಗಳಿಗೂ ಒಂದು ರೀತಿಯ ಕುತೂಹಲವಿತ್ತು. ಈ ಎಲ್ಲಾ ಪ್ರಶ್ನೆ, ಅನುಮಾನಗಳಿಗೆ ಧೋನಿ ಸ್ಪಷನೆ ನೀಡಿದ್ದಾರೆ.
ಇಂಡಿಯಾ ಸಿಮೆಂಟ್ಸ್ ಕಂಪೆನಿಯ 75ನೇ ವರ್ಷದ ಸಂಭ್ರಮದ ಸಂವಾದ ಕಾರ್ಯಕ್ರಮದಲ್ಲಿ ಧೋನಿ ತನ್ನ ನಿವೃತ್ತಿಯ ಬಗ್ಗೆ ಅಭಿಮಾನಿಗಳೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಅಂದ ಹಾಗೇ, ಬಹುತೇಕ ಎಲ್ಲರೂ ಅಂದುಕೊAಡಿದ್ದರು.. ಮಹೇಂದ್ರ ಸಿಂಗ್ ಧೋನಿ ಅವರಿಗೆ ಈ ಬಾರಿಯ ಐಪಿಎಲ್ ಕಡೆಯ ಐಪಿಎಲ್ ಆಗಲಿದೆ ಅಂತ. ಆದ್ರೆ ಧೋನಿ ಇನ್ನೂ ಒಂದು ವರ್ಷ ಆಡುವುದಾಗಿ ಹೇಳಿಕೊಂಡಿದ್ದಾರೆ.
ವಿದಾಯದ ಬಗ್ಗೆ ಹೇಳುವುದಾದ್ರೆ, ಸಿಎಸ್ ಕೆ ಪರ ಆಡುವುದನ್ನು ನೀವು ಇನ್ನೂ ನೋಡಬಹುದು. ಅದು ನನ್ನ ವಿದಾಯದ ಪಂದ್ಯವಾಗಲಿದೆ. ಚೆನ್ನೈ ನಲ್ಲಿ ನನ್ನ ವಿದಾಯ ಪಂದ್ಯವನ್ನು ನೀವು ನೋಡಬಹುದು. ಅಲ್ಲಿ ನಾನು ಅಭಿಮಾನಿಗಳನ್ನು ಭೇಟಿ ಯಾಗಲಿದ್ದೇನೆ ಎಂದು ಧೋನಿ ಹೇಳಿದ್ದಾರೆ. ಅಂದ ಮೇಲೆ ಧೋನಿ ಮುಂದಿನ ಐಪಿಎಲ್ ನಲ್ಲಿ ವಿದಾಯ ಹೇಳುತ್ತಾರೆ ಅನ್ನೋದು ಬಹುತೇಕ ಪಕ್ಕಾ ಆಗಿದೆ.
15ನೇ ಆವೃತ್ತಿಯ ಐಪಿಎಲ್ ನಲ್ಲಿ ಸಿಎಸ್ ಕೆ ತಂಡ ಮೂವರು ಆಟಗಾರರನ್ನು ಉಳಿಸಿಕೊಳ್ಳಲಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡು ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಲಿದೆ ಎಂಬ ವಿಚಾರವೂ ಗುಟ್ಟಾಗಿ ಉಳಿದಿಲ್ಲ.
ಇನ್ನು ಸಿಎಸ್ ಕೆ ತಂಡದ ಯಶಸ್ಸಿನ ಬಗ್ಗೆ ಮಾತನಾಡಿದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ದಿನ ಎಂದೂ ನೆನಪಿನಲ್ಲಿರುತ್ತದೆ ಎಂದು ಹೇಳಿದ್ದಾರೆ.
ಐಪಿಎಲ್ ನಿವೃತ್ತಿಯ ಬಳಿಕ ಬಾಲಿವುಡ್ ಗೆ ಎಂಟ್ರಿಯಾಗುತ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಧೋನಿ, ನಟನೆ ಮಾಡುವುದು ಅಷ್ಟು ಸುಲಭವಲ್ಲ. ಜಾಹಿರಾತಿನಲ್ಲಿ ನಟನೆ ಮಾಡುತ್ತೇನೆ. ಹಾಗಂತ ಸಿನಿಮಾದಲ್ಲಿ ನಟಿಸುವುದು ಕಷ್ಟ. ನನ್ನದು ಏನಿದ್ರೂ ಕ್ರಿಕೆಟ್ ನಂಟು. ನಿವೃತ್ತಿಯ ನಂತರವೂ ಕ್ರಿಕೆಟ್ ಜೊತೆಗೆ ನಂಟಿರುತ್ತದೆ ಎಂದು ಧೋನಿ ಹೇಳಿದ್ದಾರೆ.
ಇದೇ ವೇಳೆ, ಇಂಡಿಯಾ ಸಿಮೆಂಟ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್. ಶ್ರೀನಿವಾಸನ್ ಮಾತನಾಡಿ, ಸಿಎಸ್ ಕೆ ತಂಡದಿAದ ಇಂಡಿಯಾ ಸಿಮೆಂಟ್ಸ್ ಉನ್ನತ ಮಟ್ಟಕ್ಕೇರಿದೆ ಎಂದ್ರು. ಇದಕ್ಕೆಲ್ಲ ಕಾರಣ ಮಹೇಂದ್ರ ಸಿಂಗ್ ಧೋನಿ. ಧೋನಿ ಅವರು ಫ್ಯಾಕ್ಟರಿಗೆ ಭೇಟಿ ಕೊಟ್ಟು ಅಲ್ಲಿನ ಸಿಬ್ಬಂದಿಗಳ ಜೊತೆಗೂ ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ ಕಪ್ ಇಂಡಿಯಾ ಸಿಮೆಂಟ್ಸ್ ಗೆ ಉಡುಗೊರೆಯಾಗಲಿದೆ ಎಂದು ಎನ್. ಶ್ರೀನಿವಾಸನ್ ವಿಶ್ವಾಸ ವ್ಯಕ್ತಪಡಿಸಿದ್ರು.