ವೈದ್ಯರ ಎಡವಟ್ಟು : ಪ್ರಜ್ಞಾಹೀನ ಸ್ಥಿತಿಯಲ್ಲಿ 2 ತಿಂಗಳ ಮಗು
ಯಾದಗಿರಿ : ವೈದ್ಯರ ಎಡವಟ್ಟಿನಿಂದ ಎರಡು ತಿಂಗಳ ಹಸುಗೂಸು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ನಗರದ ವಾತ್ಸಲ್ಯ ಮಕ್ಕಳ ಆಸ್ಪತ್ರೆಯ ವೈದ್ಯರು ಮಾಡಿದ ಕರ್ತವ್ಯ ಲೋಪದಿಂದ ನೆಗಡಿ ಕೆಮ್ಮುನಿಂದ ಬಳಲುತ್ತಿದ್ದ, ಎರಡು ವರ್ಷದ ಮಗು ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದೆ.
ಸುರಪುರದ ನಿವಾಸಿ ಝರಿನಾ ಬೇಗಂ ಎಂಬವರು ತಮ್ಮ ಎರಡು ತಿಂಗಳ ಮಗುವಿಗೆ, ನೆಗಡಿ ಕೆಮ್ಮು ಹಿನ್ನೆಲೆ ಯಾದಗಿರಿ ವಾತ್ಸಲ್ಯ ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು.
ಆದ್ರೆ ಆಸ್ಪತ್ರೆಯ ಸಿಬ್ಬಂದಿ ಬೇರೆ ಮಗುವಿಗೆ ಕೊಡುವ ಡೋಸ್ ಇಂಜೆಕ್ಷನನ್ನು ಝರಿನಾ ಬೇಗಂ ಅವರ ಮಗುವಿಗೆ ನೀಡಿದ್ದು, ಮಗು ಕಳೆದ ಏಳೆಂಟು ಗಂಟೆಯಿಂದ ಮಗು ಕಣ್ಣು ಬಿಡುತ್ತಿಲ್ಲ.
ಇದರಿಂದಾಗಿ ಝರಿನಾ ಬೇಗಂ ಗಾಬರಿಗೊಂಡು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಆಗ ಮಗುವಿನ ಔಷಧಿ ಬದಲಾದ ವಿಚಾರ ತಿಳಿದಿದೆ.
ಆದ್ರೆ ಇದನ್ನ ಒಪ್ಪದ ವೈದ್ಯರು ಉಲ್ಟಾ ಹೊಡೆದಿದ್ದು, ಮಗುವಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾರೆ.
ಅಲ್ಲದೆ ಝರಿನಾ ಬೇಗಂ ಆರೋಪ ತಳ್ಳಿಹಾಕಿ ಮಗುವಿನ ತಾಯಿ ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳಿದ್ದಾರೆ.