ಭಗತ್ ಸಿಂಗ್ ಮತ್ತು ಬಾಬಾಸಾಹೇಬರ ಕನಸುಗಳು ನನಸಾಗುತ್ತವೆ : ಅರವಿಂದ್ ಕೇಜ್ರಿವಾಲ್ – Saaksha Tv
ಪಂಜಾಬ್ : ಭಗತ್ ಸಿಂಗ್ ಮತ್ತು ಬಾಬಾಸಾಹೇಬರ ಕನಸುಗಳು ನನಸಾಗುತ್ತವೆ, ನಾವೆಲ್ಲರೂ ಹೊಸ ಭಾರತವನ್ನು ನಿರ್ಮಾಣ ಮಾಡಲು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
https://twitter.com/ArvindKejriwal/status/1501852734647324677?ref_src=twsrc%5Etfw%7Ctwcamp%5Etweetembed%7Ctwterm%5E1501852734647324677%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Fcities%2Fchandigarh%2Fpunjab-election-results-2022-live-updates-bhagwant-mann-charanjit-singh-channi-aap-congress-sad-7809742%2F
ಇಂದು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತ ದೊರೆತಿದ್ದು, ಇದರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ದೊರೆತ ನಂತರ ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ ಏನೂ ಆಗುವುದಿಲ್ಲ ಎಂದು ಭಗತ್ ಸಿಂಗ್ ಒಮ್ಮೆ ಹೇಳಿದ್ದರು. ಕಳೆದ 75 ವರ್ಷಗಳಲ್ಲಿ, ಈ ಪಕ್ಷಗಳು ಮತ್ತು ರಾಜಕಾರಣಿಗಳು ಬ್ರಿಟಿಷರ ವ್ಯವಸ್ಥೆಯನ್ನು ಉಳಿಸಿಕೊಂಡಿದ್ದಾರೆ, ಅವರು ಯಾವುದೇ ಶಾಲೆ ಅಥವಾ ಆಸ್ಪತ್ರೆಗಳನ್ನು ಮಾಡಲಿಲ್ಲ. ಕಳೆದ 7 ವರ್ಷಗಳಲ್ಲಿ ಎಎಪಿ ವ್ಯವಸ್ಥೆಯನ್ನು ಬದಲಾಯಿಸಿದೆ” ಎಂದು ಕೇಜ್ರಿವಾಲ್ ಹೇಳಿದರು.
“ಎಎಪಿ ವಿರುದ್ಧ ಎಲ್ಲರೂ ಒಟ್ಟುಗೂಡಿದರು, ಕೇಜ್ರಿವಾಲ್ ಭಯೋತ್ಪಾದಕ ಎಂದು ಹೇಳಿದರು, ಕೇಜಿರ್ವಾಲ್ ಭಯೋತ್ಪಾದಕ ಅಲ್ಲ, ಅವರು ನಿಜವಾದ ದೇಶಭಕ್ತ ಎಂದು ಜನರು ನಮಗೆ ಮತ ಹಾಕುವ ಮೂಲಕ ಹೇಳಿದ್ದಾರೆ. ಇಲ್ಲಿ ದ್ವೇಷಕ್ಕೆ ಸ್ಥಳವಿಲ್ಲ, ನಮ್ಮ ಸಹೋದರಿಯರು ಮತ್ತು ತಾಯಂದಿರು ಎಲ್ಲಿ ಸುರಕ್ಷಿತವಾಗಿರುತ್ತಾರೆ, ಇಲ್ಲಿ ಶ್ರೀಮಂತರು ಮತ್ತು ಬಡವರು ಉತ್ತಮ ಶಿಕ್ಷಣ ಪಡೆಯುತ್ತಾರೆ ಎಂದು ತಿಳಿಸಿದರು.









