ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸಿಸಿಹೆಚ್ ನ್ಯಾಯಾಲಯ ಸೆ.14ರವರೆಗೆ(ಸೋಮವಾರ) ಮುಂದೂಡಿದೆ.
ನಟಿ ರಾಗಿಣಿ ಪರ ವಕೀಲರು ಜಾಮೀನು ಕೋರಿ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್ಗೆ ನಿನ್ನೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ದಾಖಲಿಸಿಕೊಂಡಿದ್ದ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಇಂದು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿದೆ. ಕೋರ್ಟ್ ನೀಡಿದ ನೋಟಿಸ್ಗೆ ಸಿಸಿಬಿ ಪೊಲೀಸರು ಉತ್ತರ ನೀಡಬೇಕು ಅಥವಾ ಆಕ್ಷೇಪಣೆ ಸಲ್ಲಿಸಬೇಕು. ಪ್ರಕರಣದ ತನಿಖೆ ಕುರಿತ ಕೇಸ್ ಡೈರಿಯನ್ನು ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದ್ದು, ನಟಿ ರಾಗಿಣಿಗೆ ಸೆ.14ರವರೆಗೆ ಬಿಡುಗಡೆಯ ಭಾಗ್ಯವಾಗಲಿ, ರಿಲೀಫ್ ಆಗಲಿ ಸಿಕ್ಕಿಲ್ಲ.
ಆರೋಪಿಯು ಪೊಲೀಸರ ಕಸ್ಟಡಿಯಲ್ಲಿರುವಾಗ ಕೋರ್ಟ್ಗಳು ಜಾಮೀನು ಕೊಡಲು ಬರುವುದಿಲ್ಲ. ಇಂದು ಎನ್ಡಿಪಿಎಸ್ ಕೋರ್ಟ್ನಲ್ಲಿ ರಾಗಿಣಿ ಸಿಸಿಬಿ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ವಿಚಾರಣೆ ಇದೆ. ಒಂದು ವೇಳೆ ಎನ್ಡಿಪಿಎಸ್ ಕೋರ್ಟ್ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರೆ ಮಾತ್ರ ಜಾಮೀನು ವಿಚಾರಣೆ ಕೈಗೆತ್ತಿಕೊಳ್ಳಲು ಮತ್ತೊಂದು ಕೋರ್ಟ್ಗೆ ಅವಕಾಶ ಇದೆ. ಈ ಕಾರಣಕ್ಕೆ ಇಂದು ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂಡೂಡಿದೆ.
ಡಿಕೆಶಿ ಸಿಎಂ ಆಗೋದು 35 ವರ್ಷಗಳ ಹಿಂದೆಯೇ ಫಿಕ್ಸ್ ಆಗಿತ್ತು -ರಾಮ ಅಯೋಧ್ಯೆ ಗೆದ್ದಂತೆ ಡಿಕೆಶಿ ಕರ್ನಾಟಕ ಗೆದ್ದಿದ್ದಾರೆ:ಡಿಕೆ ಶಿವಕುಮಾರ್ 5 ವರ್ಷ ಪೂರ್ಣ ಅವಧಿಗೆ ಸಿಎಂ- ರಾಜಗುರು ದ್ವಾರಕನಾಥ್ ಗುರೂಜಿಯಿಂದ ಸ್ಫೋಟಕ ಭವಿಷ್ಯ
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರ ಆಪ್ತ ಸಲಹೆಗಾರರೂ ಆಗಿರುವ ರಾಜಗುರು ದ್ವಾರಕನಾಥ್ ಗುರೂಜಿ...








