ದುನಿಯಾ ವಿಜಯ್ ,ಉಮಾಶ್ರೀ , ಸಾಧು ಕೋಕಿಲಾ , ಜಯಮಾಲಾ ವಿರುದ್ಧ ಕೇಸ್..!!!
ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣಿಗಳು , ಹೋರಾಟಗಾರರ ಜೊತೆಗೆ ಸ್ಯಾಂಡಲ್ ವುಡ್ ನಟನಟಿಯರು ಕೈ ಜೋಡಿಸಿದ್ದರು.. ಈ ಪೈಕಿ ದುನಿಯಾ ವಿಜಯ್ ,ಉಮಾಶ್ರೀ , ಸಾಧು ಕೋಕಿಲಾ , ಜಯಮಾಲಾ , ಸಾ.ರಾ ಗೋವಿಂದು ಕೂಡ ಇದ್ದರು.. ಆದ್ರೆ ಇವರೆಲ್ಲರೂ ಮೇಲೂ ಈಗ ದೂರು ದಾಖಲಾಗಿದೆ.. ಹೌದು.. ಸಾತನೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಕೇಸ್ ದಾಖಲಾಗಿದೆ.. ನಟಿಯರ ಜೊತೆಗೆ ಉಮಾಶ್ರೀ ಹಾಗೂ ಜಯಮಾಲಾ ರಾಜಕೀಯದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ..
ಕಾಂಗ್ರೆಸ್ ನೇತೃತ್ವದ ಪಾದಯಾತ್ರೆಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾಗ ಇವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರೋ ಆರೋಪದ ಮೇಲೆ ಇವರ ವಿರುದ್ಧ ಕೇಸ್ ದಾಖಲಿಸಲಾಗಿದೆ.. ಅಷ್ಟೇ ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರ ವಿರುದ್ಧ ಕೇಸ್ ದಾಖಲಿಸಲಾಗಿದೆ.. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಟ್ಟು 31 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಉಮಾಶ್ರೀ ಅವರನ್ನು ಆರೋಪಿ ನಂಬರ್ 8. ಸಾಧುಕೋಕಿಲ ಎ 27 , ಸಾ.ರಾ.ಗೋವಿಂದು ಎ 28 , ಜಯಮಾಲ ಎ29 , ದುನಿಯಾ ವಿಜಯ್ ಎ30 ಆಗಿದ್ದಾರೆ.
ಪ್ರಕರಣ ಕುರಿತಾಗಿ ಎಫ್ಐಆರ್ ದಾಖಲಾಗಿದ್ದು ಮೊದಲ ಆರೋಪಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾಯಕ ಡಿ.ಕೆ.ಶಿವಕುಮಾರ್ ಹಾಗೂ 2ಡನೇ ಆರೋಪಿ ಮಾಜಿ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆಗುತ್ತಿದ್ದು, ಸರ್ಕಾರವು ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಹೇರಿದೆ. ಹಾಗಿದ್ದರೂ ಕಾಂಗ್ರೆಸ್ ಪಕ್ಷವು ಇತರ ಕೆಲವು ಸಂಘಟನೆಗಳೊಟ್ಟಿಗೆ ಸೇರಿ ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿದ್ದು, ಸರ್ಕಾರವು ಈ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದೆ. ರಾಮನಗರ ಜಿಲ್ಲಾಧಿಕಾರಿಗಳು ಈಗಾಗಲೇ ತಿಳಿವಳಿಕೆ ಪತ್ರವನ್ನು ನೀಡಿದ್ದರಾದರೂ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಇದೇ ಮೇಕೆದಾಟು ಪಾದಯಾತ್ರೆಗೆ ವಾಣಿಜ್ಯ ಮಂಡಳಿ ಬೆಂಬಲಿಸಿದ್ದೂ ಅಲ್ಲದೇ ಸಿನಿಮಾರಂಗದ ಅನೇಕ ತಾರೆಯರು ಭಾಗಿಯಾಗಿದ್ದರು..