ಯಾದಗಿರಿ: ರಾಜ್ಯಕ್ಕೆ ಈ ವರ್ಷ ಭೀಕರ ಆವರಿಸಿದೆ. ಲೋಡ್ ಶೆಡ್ಡಿಂಗ್ ನಿಂದಾಗಿ ರೈತರು ಕಂಗಾಲಾಗಿದ್ದಾರೆ.
ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದ ಯಾದಗಿರಿ (Yadagiri) ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಐಪಿಸೆಟ್ ಗೆ ಕೇವಲ 3 ಗಂಟೆ 3 ಫೇಸ್ ವಿದ್ಯುತ್ ಪೂರೈಕೆಯಿಂದ ಮಾಡಲಾಗುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಬೆಳೆಗಳು ಒಣಗುತ್ತಿವೆ. ಇದರಿಂದಾಗಿ ರೈತರು ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ್ ಗ್ರಾಮದ ರೈತ ಚನ್ನಪ್ಪ ತನ್ನ ಜಮೀನಿನಲ್ಲಿಯೇ ನಿಂತು, ಬೆಳೆ ಒಣಗುತ್ತಿರೋದಕ್ಕೆ ನೋವು ತೋಡಿಕೊಂಡಿದ್ದಾರೆ. ರೈತರ ಗೋಳು ಯಾರಿಗೆ ಅರ್ಥವಾಗ್ತದೆ. 6 ಗಂಟೆ ವಿದ್ಯುತ್ ಕೊಟ್ಟು ವೊಲ್ಟೇಜ್ ಸಮಸ್ಯೆ ಮಾಡ್ತಿದ್ದಾರೆ. ಇದರಿಂದಾಗಿ ಬೆಳೆಗೆ ನೀರು ಹರಿಸಲು ಆಗುತ್ತಿಲ್ಲ. ಬರಗಾಲದಿಂದ ತತ್ತರಿಸಿ ರೈತರು ಸಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.