Fire Accident : 25 ಟ್ರಾಕ್ಟರ್ ನಷ್ಟು ಬಣವೆ ಬೆಂಕಿಗಾಹುತಿ…
ಗದಗ : 25 ಟ್ರಾಕ್ಟರ್ ನಷ್ಟು ಬೃಹತ್ ಹೊಟ್ಟಿನ ಬಣವಿಗೆ ಬೆಂಕಿ ತಗುಲಿ ಸಂಪೂರ್ಣ ಬಣವಿ ಸುಟ್ಟು ಕರಕಲಾಗಿದೆ..
ಈ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ..
ದನಗಳ ಆಹಾರ ಬೆಂಕಿಗೆ ಆಹುತಿಯಾಗಿದೆ..
ನಿಲಪ್ಪಗೌಡ ಪಾಟೀಲ್ ಎನ್ನೋರ ಬಣವಿ ಇದಾಗಿದ್ದು ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ.. ಜೆಸಿಬಿ ಸಹಾಯದಿಂದ ಅಳಿದುಳಿದ ಮೇವನ್ನ ಹೊರತೆಗೆಯಲು ಜನರು ಪ್ರಯತ್ನ ಪಟ್ಟರು..
ಬೆಂಕಿ ಅನಾಹುತಕ್ಕೆ ಇನ್ನೂವರೆಗೂ ನಿಖರ ಕಾರಣ ತಿಳಿದುಬಂದಿಲ್ಲ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ








