ಬೆಂಗಳೂರು: ವರ್ಗಾವಣೆಗೊಂಡರೂ ಕರ್ತವ್ಯ ಲೋಪ ಎಸಗಿದ 27 ಅಧಿಕಾರಿಗಳಿಗೆ ಸರ್ಕಾರ ಗೇಟ್ ಪಾಸ್ ಕೊಟ್ಟಿದೆ.
ವರ್ಗಾವಣೆಗೊಂಡರೂ ಇವರೆಲ್ಲ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ 5 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, 7 ಜನ ಸಹಾಯಕ ಇಂಜಿನಿಯರ್, 15 ಜನ ಜೂನಿಯರ್ ಇಂಜಿನಿಯರ್ ಗಲಿಗೆ ಗೇಟ್ ಪಾಸ್ ನೀಡಲಾಗಿದೆ ಎಂದು ಇಲಾಖೆ ಆದೇಶ ಹೊರಡಿಸಿದೆ. ಅಮಾನತ್ತುಗೊಂಡಿರುವ ಅಧಿಕಾರಿಗಳನ್ನು ಕೂಡಲೇ ಹುದ್ದೆಯಿಂದ ಬಿಡುಗಡೆಗೊಳಿಸಲು ಸೂಚಿನೆ ನೀಡಲಾಗಿದೆ.