ಬೆಂಗಳೂರು: ಆನ್ ಲೈನ್ ನಲ್ಲಿ ಹೂಡಿಕೆ ಮಾಡಲು ಹೋಗಿ ಸಾಫ್ಟವೇರ್ ಉದ್ಯೋಗಿಯೊಬ್ಬರು 50 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸೈಬರ್ (Cyber Crime) ವಂಚಕರ ಜಾಲಕ್ಕೆ ಸಿಲುಕಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ ಲೈನ್ ವಂಚಕರು, ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 50.53 ಲಕ್ಷ ರೂ. ವಂಚಿಸಿದ್ದಾರೆ. ವಂಚಕರು ವಿದೇಶದಿಂದ ವಾಟ್ಸಾಪ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ದರ್ಶನ್ ಅವರನ್ನು ಸಂಪರ್ಕಿಸಿದ್ದಾರೆ. ಆ ನಂತರ ಆನಲೈನ್ ನಲ್ಲಿ ಹೂಡಿಕೆ ಮಾಡಲು ಹೇಳಿದ್ದಾರೆ.
ಮೊದಲು ದರ್ಶನ್ ಸಣ್ಣ ಮೊತ್ತದ ಹೂಡಿಕೆ ಮಾಡಿ ದುಪ್ಪಟ್ಟು ಆದಾಯ ಗಳಿಸಿದ್ದಾರೆ. ನಂತರ ವಂಚಕರು 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಹೇಳಿದ್ದಾರೆ. ಅದರ ನಂತರ 50 ಲಕ್ಷ ರೂ. ಹೂಡಿಕೆ ಮಾಡಲು ಹೇಳಿದ್ದಾರೆ. ಆ ನಂತರ ಅವರು ಹಣ ಹಾಕಿಲ್ಲ. ಸಂಪರ್ಕಿಸಿದರೆ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.
ಎಮ್ಮಾ ಮತ್ತು ಖಾಸಗಿ ಜಾಹೀರಾತು ಸಂಸ್ಥೆಯ ಹೆಸರಿನ ಮೇಲೆ ವಂಚನೆ ಮಾಡಲಾಗಿದೆ. ಈ ಪ್ರಕರಣ ಕೂಡ ಬೇರೆ ಸೈಬರ್ ಕ್ರೈಂನಂತೆಯೇ ಇದೆ. ವಂಚಕರಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.