ಖರ್ಗೆ ರಾವಣನ ಹೇಳಿಕೆಗೆ ಮೋದಿ ತಿರುಗೇಟು – “ರಾಮನಲ್ಲಿ ನಂಬಿಕೆ ಇಲ್ಲದವರು ರಾವಣನನ್ನ ಉಲ್ಲೇಖಿಸುತ್ತಾರೆ”
ನರೇಂದ್ರ ಮೋದಿ ನೀವೇನು 100 ತಲೆಯ ರಾವಣನಾ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರದಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ತಿರುಗೇಟು ನೀಡಿದ್ದಾರೆ.
ಗುಜರಾತ್ ನ ಪಂಚಮಹಲ್ ನ ಕಲೋಲ್ ನಲ್ಲಿ ಪ್ರಧಾನಿ ಮೋದಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು – ನನ್ನನ್ನು ನಿಂದಿಸಲು ಕಾಂಗ್ರೆಸ್ನಲ್ಲಿ ಪೈಪೋಟಿ ಇದೆ. ಹೆಚ್ಚು ಹೆಚ್ಚು ಕೆಸರು ಎಸೆದಷ್ಟೂ ಕಮಲ ಅರಳುತ್ತದೆ ಎಂದು ಹೇಳಿದ್ದಾರೆ.
ಸೂರತ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ “ಅಯೋಧ್ಯೆಯಲ್ಲಿ ರಾಮನ ಅಸ್ತಿತ್ವ ಮತ್ತು ರಾಮಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೆಸ್ಗೆ ನಂಬಿಕೆ ಇಲ್ಲ. ರಾಮಸೇತುವನ್ನು ವಿರೋಧಿಸುತ್ತಾರೆ. ಆದರೇ ನನ್ನನ್ನ ನಿಂದಿಸಲು ರಾಮಾಯಣ ಪಾತ್ರದ ರಾವಣನನ್ನ ಉಲ್ಲೇಖಿಸುತ್ತಾರೆ. ರಾಮನನ್ನ ನಂಬಬೇಡಿ ಆದರೆ ನನ್ನನ್ನ ನಿಂದಿಸಲು ರಾವಣನ ಬಗ್ಗೆ ಪ್ರಸ್ತಾಪಿಸಿ” ಎಂದು ಪ್ರಧಾನಿ ತಿರುಗೇಟು ನೀಡಿದ್ದಾರೆ. ನಡೆಸಿದ್ದಾರೆ.
Gujarat Poll : Narendra Modi Gujarat Rally; BJP Gujarat Vidhan Sabha Election Campaign