ಹೆಚ್.ಡಿ.ಕುಮಾರಸ್ವಾಮಿ ಹುಚ್ಚುಚ್ಚಾಗಿ ಹೇಳಿಕೆ ಕೊಡ್ತಿದ್ದಾರೆ : ಸುಮಲತಾ
ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹುಚ್ಚುಚ್ಚರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂ ಬಿರುಕು ವಿಚಾರವನ್ನು ನನಗಿರುವ ಮಾಹಿತಿಯ ಆಧಾರದಲ್ಲಿ ಹೇಳಿದ್ದೇನೆ.
ಇದು ನನ್ನ ಅಭಿಪ್ರಾಯ ಬೇರೆಯವರು ಏನು ಹೇಳಿದ್ದಾರೋ ಗೊತ್ತಿಲ್ಲ. ಜನರಿಗೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇನೆ ಇದರಿಂದ ಏನು ಪ್ರತಿಫಲವನ್ನೂ ಬಯಸದೆ ಹೋರಾಟ ಮಾಡುತ್ತೇನೆ ಈ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ಜನ ನನ್ನ ಜೊತೆ ಇದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.
ಮಂಡ್ಯ ಜಿಲ್ಲೆಯ ಶಾಸಕರು ಅವರ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ.ಅದರ ಬದಲಿಗೆ ಎಂಪಿ ಕೆಲಸ ಮಾಡುತ್ತಿಲ್ಲ ಎಂದು ತಿರುಚುವುದು ಯಾಕೆ ? ಎಂಪಿ ಕೆಲಸ ಯಾವುದು, ಎಂಎಲ್ಎ ಕೆಲಸ ಯಾವುದು ಅಂತಾ ಇವರಿಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಹುಚ್ಚುಚ್ಚರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ.
ಅಕ್ರಮ ಪರ ಹೋರಾಟ ಮಾಡಿದರೆ ನನ್ನ ವಿರೋಧಿಸುತ್ತೇನೆ. ಬಾಂಬುಗಳು, ಅಸ್ತ್ರಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಆಡಿಯೋ ಏನು ಬೇಕಾದರೂ ಹೊರ ಬಿಡಲಿ ಬೇಕಾದರೆ ಮಿಸೈಲ್ ನ್ನೇ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.