ಹಲ್ದ್ವಾನಿ ರೈಲ್ವೆ ಭೂಮಿ ಒತ್ತುವರಿ – 8 ವಾರ ಕಾಲಾವಕಾಶ ಕೊಟ್ಟ ಸುಪ್ರೀಂ…
ಹಲ್ದ್ವಾನಿಯಲ್ಲಿ ರೈಲ್ವೇ ಹಕ್ಕು ಪಡೆದಿರುವ ಭೂಮಿಯಿಂದ ಒತ್ತುವರಿದಾರರನ್ನ ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.
ಜನರ ಪುನರ್ವಸತಿಗಾಗಿ ಮತ್ತು ರೈಲ್ವೆಯ ಅಗತ್ಯವನ್ನು ಪರಿಗಣಿಸಿ ಕೆಲಸ ಮಾಡಲು 8 ವಾರಗಳ ಕಾಲಾವಕಾಶ ನೀಡುವ ಅಧಿಕಾರಿಗಳ ಮನವಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
“ನಾವು ಈಗಾಗಲೇ ನ್ಯಾಯಾಲಯದಿಂದ ಪರಿಹಾರವನ್ನು ಪಡೆದುಕೊಂಡಿದ್ದೇವೆ, ಈಗ ನಮಗೆ ಹೆಚ್ಚಿನ ಸಮಯ ಸಿಕ್ಕಿದೆ ಮತ್ತು ಮೇ ತಿಂಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ” ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ವಿಷಯ ಏನೆಂದರೇ ??
ಹಲ್ದ್ವಾನಿಯ ಬಂಭುಲ್ಪುರದಲ್ಲಿ 29 ಎಕರೆ ರೈಲ್ವೆ ಭೂಮಿಯಲ್ಲಿ ಜನ ವಾಸಿಸುತ್ತಿದ್ದರು. ಒಂದು ವಾರದೊಳಗೆ ಅಂದರೆ ಜನವರಿ 9 ರೊಳಗೆ ಅತಿಕ್ರಮಣದಾರರು ಒತ್ತುವರಿ ತೆರವು ಮಾಡುವಂತೆ ರೈಲ್ವೆ ಇಲಾಖೆ ಪತ್ರಿಕೆಗಳ ಮೂಲಕ ನೋಟಿಸ್ ಜಾರಿ ಮಾಡಿತ್ತು. ಉತ್ತರಾಖಂಡದ ನೈನಿತಾಲ್ ಹೈಕೋರ್ಟ್ ಈ ಅಕ್ರಮ ಅತಿಕ್ರಮಣವನ್ನು ನೆಲಸಮ ಮಾಡುವಂತೆ ಆದೇಶಿಸಿತ್ತು. ಇದಾದ ಬಳಿಕ ಸುಮಾರು 4 ಸಾವಿರಕ್ಕೂ ಹೆಚ್ಚು ಸ್ಲಂ ಮನೆಗಳನ್ನ ನೆಲಸಮ ಮಾಡಬೇಕಿತ್ತು. ಆದರೆ ಡಿಸೆಂಬರ್ ನಲ್ಲಿ ಕೆಲವರು ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಜನವರಿ 5ರಂದು ನಡೆದ ವಿಚಾರಣೆಯಲ್ಲಿ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. 7 ದಿನಗಳಲ್ಲಿ 50 ಸಾವಿರ ಜನರನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
Haldwani land encroachment : Uttarakhand Haldwani Railway Land Encroachment Hearing in supreme Court








