ADVERTISEMENT
Sunday, June 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಿ : ಶಂಕರ್ ದ್ವಾರಕನಾಥ್ ಗುಹಾ

Mahesh M Dhandu by Mahesh M Dhandu
July 12, 2021
in Newsbeat, State, ರಾಜ್ಯ
Sri Guru Raghavendra Co-operative Bank
Share on FacebookShare on TwitterShare on WhatsappShare on Telegram

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಿ : ಶಂಕರ್ ದ್ವಾರಕನಾಥ್ ಗುಹಾ

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ.ಶಂಕರ್ ದ್ವಾರಕನಾಥ್ ಗುಹಾ ಆಗ್ರಹಿಸಿದ್ದಾರೆ.

Related posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

June 15, 2025
ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

June 15, 2025

ಪ್ರರಕಣ ಸಂಬಂಧ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಶಂಕರ್ ದ್ವಾರಕನಾಥ್ ಗುಹಾ ಅವರು, ಈಗಾಗ್ಲೆ ಪ್ರಕರಣ ದಾಖಲಾಗಿ 2 ವರ್ಷ ಕಳೆದಿದೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎರಡು ವರ್ಷ ಕಳೆದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ಈಗಾಗ್ಲೇ 70 ಜನ ಠೇವಣಿದಾರರು ಮನನೊಂದು ವಿವಿಧ ಕಾಯಿಲೆಗೆ ತುತ್ತಾಗಿ ಸತ್ತಿದ್ದಾರೆ. ಇನ್ನೂ 6 ತಿಂಗಳ ಕಾಲ ಬ್ಯಾಂಕ್ ನ ವಹಿವಾಟು ಯಥಾಸ್ಥಿತಿಯಲ್ಲಿ (ಯಾವುದೇ ರೀತಿಯ ವ್ಯವಹಾರ ನಡೆಸದಂತೆ) ಇರಬೇಕು ಎಂಬ ಆದೇಶ ಬಂದಿದೆ. ಇದರಿಂದ ಠೇವಣಿದಾರರ ಹಣ ಬ್ಯಾಂಕ್ ನಿಂದ ತೆಗೆಯಲು ಆಗುತ್ತಿಲ್ಲ. ಸದ್ಯ ಈ ಪ್ರಕರಣವನ್ನ ಸಿಐಡಿಗೆ ನೀಡಲಾಗಿದೆ. ಆದರೆ ಸಿಐಡಿಗೆ ಈ ತನಿಖೆ ಮಾಡಲು ಬ್ಯಾಂಡ್ವಿತ್ ಇಲ್ಲ. ಹೀಗಾಗಿ ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಹೂಡಿಕೆದಾರರ ಪರವಾಗಿ ಆಗ್ರಹಿಸಿದರು.

ಈ ಬ್ಯಾಂಕ್ ಗೆ ಆರ್ ಬಿಐ ಸತತವಾಗಿ ಎ ಗ್ರೇಡ್ ಸರ್ಟಿಫಿಕೇಟ್ ನೀಡಿದೆ. ಇದನ್ನ ಗಮನಿಸಿದ್ರೆ ಇದರಲ್ಲಿ ಆರ್ಬಿಐನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ವಂಚಕ ಬ್ಯಾಂಕ್ ಗೆ ಆರ್ ಬಿ ಐ ಎ ಗ್ರೇಡ್ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇನ್ನು ವಂಚನೆ ನಡೆಸಿದ ಬ್ಯಾಂಕ್ ಈಗ ಬೇರೆ ಬೇರೆ ಕಡೆ ಬ್ರಾಂಚ್ ಗಳನ್ನ ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರೋದು ಪಕ್ಕಾ ಆಗಿದೆ. ಈ ಪ್ರಕರಣದ ಬಗ್ಗೆ ಕೇಳಿದ್ರೆ ಸಂಸದರು ಉಡಾಫೆ ಉತ್ತರ ಕೊಡ್ತಾರೆ. ಈ ಸಮಸ್ಯೆಯನ್ನು ಸಂಸದರು ಹಾಗೂ ಶಾಸಕರ ಕೈಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಮಧ್ಯಪ್ರವೇಶ ಮಾಡಬೇಕು, ನೊಂದಿರುವ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಜುಲೈ 14 ನೇ ತಾರೀಖು ಆಡಿಟ್ ರಿಪೋಟ್ ಕೊಡ್ತೀವಿ ಅಂತ ಹೇಳಿದ್ದಾರೆ.ಇದನ್ನ ಕೊಡದೆ ಇದ್ದಾರೆ ಆರ್ ಬಿಐ ಚಲೋ ಮಾಡಿ ನ್ಯಾಯ ಕೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

Sri Guru Raghavendra Co-operative Bank

ಬಳಿಕ ಠೇವಣಿದಾರ ಹರೀಶ್ ಮಾತನಾಡಿ, ಈ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಠೇವಣಿದಾರರೆಲ್ಲಾ ಬಹುತೇಕರು ಹಿರಿಯನಾಗರಿಕರಾಗಿದ್ದು,
ಕಳೆದ ವಾರ ನಾವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ್ದೆವು. ಆಗ ಅವರನ್ನ ನ್ಯಾಯ ಕೊಡಿಸಿ ಎಂದು ಕೇಳಿದಾಗ, ನನ್ನನ್ನ ಕೇಳಿ ಹಣ ಇಟ್ಟಿದ್ರಾ ಅಂತಾ ಬೇಜವಾಬ್ದಾರಿ ಉತ್ತರ ಕೊಟ್ಟರು ಎಂದು ಕೇಂದ್ರ ವಿತ್ತ ಸಚಿವೆ ಮಾತಿಗೆ ಬೇಸರ ಹೊರಹಾಕಿದರು.

ಇನ್ನು ಫಾರೆನ್ಸಿಕ್ ಆಡಿಟ್ ಇನ್ನು ಆಗೇ ಇಲ್ಲಾ, ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್ ಎಸ್ಸಿ ಆಶ್ವಥ್ ನಾರಾಯಣ್ ಡೀಫಾಲ್ಟರ್ ಆಗಿದ್ದು, 12 ಕೋಟಿ ರೂಪಾಯಿ ಹಣ ಕಟ್ಟಿಲ್ಲ ಎಂದು ಆರೋಪಿಸಿದರು. ಜೊತೆಗೆ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು.
ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ ತುರ್ತು ಕ್ರಮ ಜರುಗಿಸದೇ ಇದ್ರೆ ಆರ್ ಬಿ ಐ ಚಲೋ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಆರ್ ಬಿ ಐ ಕೂಡ ಈ ವಂಚನೆಗಳನ್ನ ನೋಡಿಕೊಂಡು ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದ ಹರೀಶ್, ಈ ಸಂಬಂಧ ಆರ್ ಬಿ ಐ ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 25 ಸಾವಿರ ಜನ ಹಣವನ್ನ ಕಳೆದುಕೊಂಡಿದ್ದಾರೆ. 2130 ಕೋಟಿ ರೂಪಾಯಿ ಗ್ರಾಹಕರಿಗೆ ವಾಪಸ್ ಬರಬೇಕಿದೆ. ಆದರೆ ಆರ್ ಬಿ ಐ ಮಾತ್ರ ಸ್ಪಷ್ಟ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ಹೊರಹಾಕಿದರು. ಈಗಾಗಲೇ ಹಣ ಕಳೆದುಕೊಂಡ ಹಲವರು ಸಾವನ್ನಪ್ಪಿದ್ದಾರೆ. ಆದಾಗ್ಯೂ ಆಡಿಟ್ ರಿಪೋರ್ಟ್ ನೆಪದಲ್ಲಿ ಸಮಯ ತಳ್ಳುತ್ತಿದ್ದಾರೆ. ವಿಳಂಬದ ಹಿಂದೆ ರಾಜಕೀಯ ಹಿತಾಸಕ್ತಿ ಕಾಣುತ್ತಿದೆ ಎಂದು ಸ್ಥಳಿಯ ರಾಜಕಾರಣಿಗಳ ವಿರುದ್ಧ ಹಣ ಹೂಡಿಕೆದಾರ ಹರೀಶ್ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಕೂಡ ಉಪಸ್ಥಿತರಿದ್ದರು.

Tags: bangalorebankshankar dwarakanath guhaSri Guru Raghavendra Co-operative Bank
ShareTweetSendShare
Join us on:

Related Posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

by Shwetha
June 15, 2025
0

ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

by Shwetha
June 15, 2025
0

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

“ಮುಖ್ಯಮಂತ್ರಿಯಾಗಿ ಇರುವಾಗಲೇ ಸಮೀಕ್ಷೆ ಮುಗಿಸಿ!” – ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

by Shwetha
June 15, 2025
0

ಬೆಂಗಳೂರು:ರಾಜ್ಯದಲ್ಲಿ ಜಾತಿಗಣತಿ ಮರುಸಮೀಕ್ಷೆ ನಡೆಸುವ ಪ್ರಸ್ತಾವನೆಯ ವಿರುದ್ಧ ಹಿರಿಯ ರಾಜಕೀಯ ನಾಯಕ ಹೆಚ್. ವಿಶ್ವನಾಥ್ ಗಂಭೀರ ಪ್ರಶ್ನೆ ಎಸೆದಿದ್ದಾರೆ. ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿರುವಾಗ,...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

by Shwetha
June 15, 2025
0

ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಎರಡು ಇಸ್ರೇಲಿ F-35 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ಈ ದಾಳಿಯು ಇಸ್ರೇಲ್ ಇರಾನ್ ಮೇಲೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಕಾತಿ 2025

by Shwetha
June 15, 2025
0

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard) ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ 630...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram