ಭಾರತ ಹಾಗೂ ಬಾಂಗ್ಲಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ವಿರುದ್ಧ ಟೀಕೆ ಕೇಳಿ ಬಂದಿದ್ದು, ಅಂಪೈರ್ ಗಳ ಎಡವಟ್ಟಿಗೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಸರಣಿಯಲ್ಲಿ ತಾವು ಇದಕ್ಕೆಲ್ಲ ಮಾನಸಿಕವಾಗಿ ಸಜ್ಜಾಗುತ್ತೇವೆ ಎಂದು ಹೇಳಿದ್ದಾರೆ.
ಮೀರ್ ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿದ್ದ ಭಾರತ ಮಹಿಳಯೆರು ಕೊನೆಯಲ್ಲಿ ಮಾಡಿಕೊಂಡ ಪ್ರಮಾದದಿಂದ ಪಂದ್ ಟೈ ಆಗಿ ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಗಿದೆ. ಇದಕ್ಕೆಲ್ಲ ಅಂಪೈರ್ ಗಳ ನಿರ್ಧಾರ ತಪ್ಪಾಗಿದ್ದೆ ಕಾರಣ ಎಂದು ಕಿಡಿಕಾರಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತಂಡವು 49.3 ಓವರ್ ಗಳಲ್ಲಿ 225 ರನ್ ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ ವನಿತೆಯರು 225 ರನ್ ಗಳಿಸಿದರು. ಇದರಿಂದಾಗಿ ಪಂದ್ಯ ಟೈ ಆಯಿತು. 4 ವಿಕೆಟ್ ಗೆ 191 ರನ್ ಗಳಿಸಿದ್ದ ಭಾರತ ತಂಡವು ಕೊನೆಯ 34 ರನ್ ಗಳಿಸುವಷ್ಟರಲ್ಲಿ ಕುಸಿತ ಕಂಡಿತು. ಸ್ಮೃತಿ ಮಂಧಾನ 59, ಡಿಯೋಲ್ 77 ಹಾಗೂ ರೋಡ್ರಿಗಸ್ 33 ರನ್ ಗಳಿದ್ದರೂ ಪಂದ್ಯ ಗೆಲ್ಲಲಿಲ್ಲ.
ಆದರೆ, ಪ್ರಶಸ್ತಿ ಪ್ರದಾನ ವೇದಿಕೆಯ ಮೇಲೆಯೇ ಅಂಪೈರಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಯಕಿ ಹರ್ಮನ್ ಪ್ರೀತ್ ಕೌರ್, ನಮ್ಮ ಈ ಪ್ರದರ್ಶನಿಂದ ಸಾಕಷ್ಟು ಕಲಿಯುವ ಅಗತ್ಯವಿದೆ. ಕ್ರಿಕೆಟ್ ನ ಹೊರತಾಗಿ ಅಂಪೈರಿಂಗ್ ನನಗೆ ತುಂಬಾ ಆಶ್ಚರ್ಯ ತಂದಿದೆ. ಇದೊಂದು ಕೆಟ್ಟ ಅಂಪೈರಿಂಗ್ ಎಂದು ಟೀಕಿಸಿದ್ದಾರೆ.
ಮುಂದಿನ ಬಾರಿ ಬಾಂಗ್ಲಾದೇಶ ಪ್ರವಾಸಕ್ಕೆ ಬಂದಾಗ ಈ ರೀತಿಯ ಅಂಪೈರಿಂಗ್ ಗೆ ಸಜ್ಜಾಗಿರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.