ಕೋವಿಡ್ ವಿಚಾರದಲ್ಲಿ ಸರ್ಕಾರದ ಎಡವಿದೆ – ಮಾಜಿ ಸಿಎಂ ಕುಮಾರಸ್ವಾಮಿ
ಮಂಡ್ಯ : ಕೊರೋನಾ ವಿಚಾರದಲ್ಲಿ ಸರ್ಕಾರದ ಎಡವಿದೆ.. ಮಾರ್ಚ್ 15 ರಲ್ಲಿ ಸರ್ಕಾರಕ್ಕೆ ಲಾಕ್ ಡೌನ್ ಮಾಡಲಿಕ್ಕೆ ಹೇಳಿದ್ದೆ. ಆಗ ಸರ್ಕಾರ ಲಾಕ್ಡೌನ್ ಮಾಡಲಿಲ್ಲ.. ಈಗ ಲಾಕ್ಡೌನ್ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ.. ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದ್ದೇನೆ.. ಪಾಪ ನಮ್ಮ ಕಾಂಗ್ರೆಸ್ ನಾಯಕರು ನಿನ್ನೆ ಗುಂಪು ಮಾಡಿಕೊಂಡು ವೀರಾವೇಶದಲ್ಲಿ ಚಾಮರಾಜನಗರಕ್ಕೆ ಹೋಗಿದ್ರು. ಅವರೇನು ಹೋಗಿ 34 ಜನರ ಪ್ರಾಣವನ್ನು ಉಳಿಸಿಕೊಂಡು ಬಂದ್ರಾ ಎಂದು ಕಿಡಿಕಾರಿದ್ಧಾರೆ.
ಇದೇ ವೇಳೆ ಸರ್ಕಾರ ಎಡವಿ ಆಗಿದೆ, ಸರ್ಕಾರ ಕೆಟ್ಟ ರೀತಿಯಲ್ಲಿ ನಡೆದುಕೊಂಡಿದೆ.. ಆದ್ರೆ ಈಗ ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಈಗ ಮಾಡಬಾರದು. ಸರ್ಕಾರಕ್ಕೆ ಬೀದಿಯಲ್ಲಿ ಜನ ಕ್ಯಾಕರಿ ಉಗಿತಾ ಇರೋದು ಗೋತ್ತು ನನಗೆ.. ಆದರೆ ಈಗ ನಾನು ರಾಜಕೀಯ ಮಾಡಲು ತಯಾರಿಲ್ಲ. ಸರ್ಕಾರಕ್ಕೆ ಈಗ ಸಲಹೆಯನ್ನು ಕೊಡುತ್ತೇನೆ..ಸಣ್ಣ ಪುಟ್ಟ ಸ್ಟೀಲ್ ಫ್ಯಾಕ್ಟರಿಗಳು ಮುಚ್ಚಿವೆ.. ಅವುಗಳನ್ನು ತೆರದು ಆಕ್ಸಿಜನ್ ತಯಾರು ಮಾಡಬಹುದು..ಇವರು ಇನ್ನೂ ಸಹ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.. ಈ ಪರಿಸ್ಥಿತಿ ನೋಡಿದ್ರೆ ರಾಜ್ಕುಮಾರ್ ಅವರ ಸಂಪತ್ತಿಗೆ ಸವಾಲು ಸಿನಿಮಾದ ಹಾಡು ನೆನಪಾಗುತ್ತದೆ. ನಗುವುದೋ ಅಳುವುದೋ ನೀವೇ ಹೇಳಿ, ಈ ಜನರ ನಡುವೆ ನಾನು ಹೇಗೆ ಬಾಳಲಿ ಎನ್ನುವ ಪರಿಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇದು ರಾಜಕೀಯ ಮಾಡುವ ಸಮಯ ಅಲ್ಲ, ಜನರನ್ನು ಉಳಿಸ ಬೇಕಾದಂತಹ ಸಮಯ. ಆರೋಗ್ಯ ಇಲಾಖೆ, ಡಾಕ್ಟರೇಟ್ ಗಳನ್ನು ಜನರು ಬೈದರೇ ಉಪಯೋಗ ಬರಲ್ಲ.. ಅವರು ಕೆಲಸ ಮಾಡಲು ಸರ್ಕಾರ ಸವಲತ್ತುಗಳನ್ನು ಕೊಡದೇ ಇದ್ದರೇ ಅವರು ಹೇಗೆ ಕೆಲಸ ಮಾಡುತ್ತಾರೆ. ಆಕ್ಸಿಜನ್ನಾ ಡಾಕ್ಟರ್ ತಗೋ ಬರುತ್ತಾರಾ, ಆಕ್ಸಿಜನ್ನಾ ಸರ್ಕಾರ ಸಪ್ಲೇ ಮಾಡಬೇಕು.. ಡಾಕ್ಟರ್ಗಳನ್ನು ಬೈದರೇ ಏನು ಪ್ರಯೋಜನವಾಗುತ್ತದೆ.. ಸರ್ಕಾರದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು.. ಈ ಬಗ್ಗೆ ವಿರೋಧ ಪಕ್ಷ ಸಲಹೆ ಕೊಡಬೇಕು, ಪ್ರಚಾರಕ್ಕೆ ಹೋಗಬಾರದು.. ಭವಿಷ್ಯ ನರೇಂದ್ರ ಮೋದಿ ಅವರು ಕೊನೆ ಹಂತದಲ್ಲಿ ಲಾಕ್ ಡೌನ್ ಮಾಡುತ್ತಾರೋ ಏನು.. ಇಡೀ ದೇಶ ಈಗ ಮುಳುಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.